Popular Posts
-
ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೊಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ? ರಾಷ್ಟ್ರ ಕವಿ ಜಿ.ಎಸ್.ಶಿವರುದ್...
-
ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು. "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗ...
-
" ಒಲವೇ ಪೂಜೆ , ಇದುವೆ ಅವರ ರಸಜೀವನದ ಓಜೆ" ಸೂಫೀ ಪ್ರೇಮ ಕಾವ್ಯ ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ್ ಖಯ್...
-
ನಾನೇಕೆ ಬರೆಯುತ್ತೇನೆ? ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್...
-
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ...
-
" ಆಧುನಿಕ ಕಾಲ" ಎಂದೆಂದಿಗೂ ಆಧುನಿಕ ಕಾಲವೇ........... ಈ ಲೇಖನ ನನ್ನ ಸ್ನೇಹಿತ ವಿನಯಕುಮಾರ ಎಂ.ಜಿ., ಪ್ರೀತಿಯಿಂದ ಜೋಳಿಗೆ ಬ್ಲಾಗ್ ಗೆ ಬರೆದು ಕೊಟ್ಟಿದ...
-
ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ...
-
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ. ೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್...
-
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್) ಚಿತ್ರ : ಒರೆ ಕಡಲ್ (೨೦೦೭) ಭಾಷೆ: ಮಲಯಾಳಂ. ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ್ ನ...
-
ಈ ಬ್ಲಾಗ್ ಗೆ ಪ್ರೀತಿಯಿಂದ ಜಿ.ಬಿ.ಅರುಣಪ್ರಸಾದ್ ಬರೆದು ಕೊಟ್ಟ ಕಥೆ. ಕನಸಾ ಮಾರುವಾ ಚೆಲುವ..... .. ಮೂರು ತುಂಬುವ ಹೊತ್ತಿಗೆ ಮನೆಯವರಿಗೆ ಬೇಡವಾಗಿದ್ದ ನಾನು ...
Wednesday, December 14, 2011
Tuesday, December 13, 2011
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್)
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್)ಚಿತ್ರ : ಒರೆ ಕಡಲ್ (೨೦೦೭)
ಭಾಷೆ: ಮಲಯಾಳಂ.
ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ್
ನಿರ್ದೇಶಕರು: ಶ್ಯಾಂಸುಂದರ್.
ಸಂಗೀತ ನಿರ್ದೇಶಕರು: ಓಸುಪೆಚ್ಚನ್.
ಛಾಯಾಗ್ರಹಣ: ಆಗಲಪ್ಪನ್
ಭಾಷೆ: ಮಲಯಾಳಂ.
ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ್
ನಿರ್ದೇಶಕರು: ಶ್ಯಾಂಸುಂದರ್.
ಸಂಗೀತ ನಿರ್ದೇಶಕರು: ಓಸುಪೆಚ್ಚನ್.
ಛಾಯಾಗ್ರಹಣ: ಆಗಲಪ್ಪನ್
ಈ ಚಲನಚಿತ್ರವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಬಹುಚರ್ಚಿತವಾಗುತ್ತಿರುವ ವಿವಾಹೇತರ ಸಂಬಂಧದಿಂದ ಆಗುವ ಮಾನಸಿಕ ತೊಳಲಾಟವನ್ನು ಈ ಚಿತ್ರ ನಿರ್ದೇಶಕರು ಸೂಕ್ಷ್ಮವಾಗಿ ಅನಾವರಣಗೊಳಿಸಿದ್ದಾರೆ.
ಈ ಚಲನಚಿತ್ರ ಬೆಂಗಾಳಿಯ ಸುನಿಲ್ ಗಂಗೋಪಾಧ್ಯಾಯರ ಕಾದಂಬರಿ ಹೀರಕ್ ದೀಪ್ತೀ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಈ ಚಲನಚಿತ್ರದಲ್ಲಿ ಬರುವ ಪಾತ್ರಗಳಲ್ಲಿ ಮುಮ್ಮುಟಿ (ಪ್ರೊ.ನಾಥನ್) ಮತ್ತು ಮೀರಾಜಾಸ್ಮಿನ್ (ದೀಪ್ತಿ)ಯಾಗಿ ರಮ್ಯ ಕೃಷ್ಣ(ಬೇಲಾ) ನಟಿಸಿದ್ದಾರೆ.
ಬಡತನ ಮತ್ತು ಅಭಿವೃದ್ದಿಯ ಬಗ್ಗೆ ಪ್ರಬಂಧ ಹಾಗೂ ಲೇಖನಗಳನ್ನು ಬರೆದು ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿರುವ ಅರ್ಥಶಾಸ್ತ್ರಜ್ಞ ಮತ್ತು ಅದೇ ಅಪಾರ್ಟಮೆಂಟ್ ನಲ್ಲಿ ವಾಸಮಾಡುತ್ತಿರುವ ಬಡಮಧ್ಯಮ ವರ್ಗದ ಮಹಿಳೆ ದೀಪ್ತಿಯ ನಡುವೆ ನಡಿಯುವ ಸಂಬಂಧಗಳ ಸೂಕ್ಷ್ಮತೆಯನ್ನು ತೆರೆದಿಡುತ್ತದೆ. ತನ್ನ ಪತಿಗೆ ಉದ್ಯೋಗವಿಲ್ಲದ ಕಾರಣ ಮನೆಯಲ್ಲಿ ಅರ್ಥಿಕ ಬಿಕ್ಕಟು ಉಂಟಾಗುವುದರಿಂದ ತನ್ನ ಗಂಡ ಕೆಲಸಕ್ಕಾಗಿ ಬೆಂಗಳೂರು ನಗರಕ್ಕೆ ಬಂದಿರುವ ಸಮಯದಲ್ಲಿ ತನ್ನ ಮಗನಿಗೆ ಜ್ಚರ ಬಂದು ಆ ಹುಡಗನಿಗೆ ಚಿಕಿತ್ಸೆ ಕೊಡಿಸಲು ಹೆಣಗಾಡುವ ದೀಪ್ತಿಯ ಕಷ್ಟವನ್ನು ನೋಡಿ ಮರುಗಿ ನೆರವಾಗುವ ಪ್ರೊ.ನಾಥನ್ ದೀಪ್ತಿಯ ಗಂಡನಿಗೆ ಕೆಲಸ ಕೊಡಿಸುವ ಭರವಸೆ ನೀಡುತ್ತಾನೆ. ಇದರೀಂದ ದೀಪ್ತಿಗೆ ಪ್ರೊ.ನಾಥನ್ ಎಂದರೆ ಪ್ರೀತಿ. ನಾಥನ್ ಗೆ ಹೆಂಗಸ ಸಂಗಡ (ಆತ್ಮೀಯತೆ) ವನ್ನು ಬಯಸುವ ನಾಥನ್ ದೀಪ್ತಿಯನ್ನು ಸಹ ಇಷ್ಟಪಡುತ್ತಾನೆ. ಅದರಂತೆ ದೀಪ್ತಿಯೊಂದಿಗೆ ದೈಹಿಕ ಸಂಪರ್ಕವು ಬೆಳೆಯುತ್ತದೆ.
ಪ್ರೊ.ನಾಥನ್ ದೈಹಿಕ ಸಂಪರ್ಕದಿಂದ ದೀಪ್ತಿಯಲ್ಲಿ ಅವನ ಕುಡಿ ಬೆಳಯಲಾರಂಭಿಸುತ್ತದೆ. ತನ್ನೊಳಗೆ ಬೆಳೆಯುವ ಅವನ ಕುಡಿಯೊಂದಿಗೆ ಪ್ರೊ.ನಾಥನ್ ಮೇಲೆ ಪ್ರೀತಿಯು ಹೆಚ್ಚಾಗುತ್ತ ಹೋಗುತ್ತದೆ. ಆದರೆ ಈ ವಿಷಯವನ್ನು ಪ್ರೊ.ನಾಥನ್ ಗೆ ತಾನು ಹೊತ್ತುಕೊಂಡಿರುವ ಮಗು ನಿನ್ನದು ಎಂದು ಹೇಳಲು ಹೋದರು ಅದು ಆಗುವುದಿಲ್ಲ. ಆದರೆ ನಾಥನ್ ಗೆ ತಾನು ಏನು ಅಲ್ಲವೆಂದು ತಿಳಿಸಿದಾಗ ಅವಳ ಮನಸ್ಸಿನ ನೋವು ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸಿನ ಮೇಲೆ ಆಕ್ರಮಣ ಮಾಡುತ್ತದೆ. ಮಗುವಿನ ಜನನದ ಬಳಿ ಮಾನಸಿಕ ತೊಳಲಾಟದಿಂದ ದೀಪ್ತಿ ಹುಚ್ಚಿಯಾಗುತ್ತಾಳೆ. ಇದರ ಏನು ತಿಳಿಯದ ಪತಿ ದೀಪ್ತಿಗೆ ಚಿಕಿತ್ಸೆ ನೀಡಿ ದೀಪ್ತಿಯನ್ನು ಮತ್ತೆ ಸರಿಪಡಿಸುತ್ತಾನೆ.
ಈ ಚಿತ್ರ ಸಂಕೀರ್ಣತೆ ಪಡೆದು ಕೊಳ್ಳುತ್ತಾ ಇರುವ ಸಮಯದಲ್ಲಿ ಪ್ರೊ.ನಾಥನ್ ಗೆಳತಿ ಬೇಲಾ (ರಮ್ಯಕೃಷ್ಣ) ನಾಥನ್ ಮನಸ್ಸಿನೊಳಗಿರುವ ಅಂತರ್ಪಟವನ್ನು ಸರಿಸಿ ವಸ್ತುಸ್ಧಿತಿಯನ್ನು ಅರಿವುವನ್ನು ಮೂಡಿಸುತ್ತಾಳೆ. ಪ್ರೊ.ನಾಥನ್ ಗೆ ಬೇಲಾ ಮೇಲು ಪ್ರೀತಿ ಹುಟ್ಟತ್ತದೆ. ಪ್ರೊ.ನಾಥನ್ ಕೂಡ ಬೇಲಾ ಪ್ರೀತಿಯ ಹುಚ್ಚನಾಗಿ ಬಿಡುತ್ತಾನೆ.
ಈ ಚಿತ್ರದಲ್ಲಿ ಬರುವ ದೀಪ್ತಿಯ ಪಾತ್ರ ನಿತ್ಯ ಜೀವನದಲ್ಲಿ ಸಾಮಾಜದಲ್ಲಿ ಒತ್ತಡಗಳ ನಡುವೆ ಬದುಕುತ್ತಿರುವ ಹೆಂಗಸರ ಸಾಮಾನ್ಯ ಬದುಕನ್ನು ತೆರದಿಡುವ ಪಾತ್ರದಲ್ಲಿ ಮೀರಾಜಾಸ್ಮಿನ್ ಅತ್ಯಂತ ಸೂಕ್ಷ್ಮವಾಗಿ ಅಭಿನಯಿಸಿ ಮನಸ್ಸಿನೊಳಗೆ ಪಾತ್ರ ಪೂರ್ಣವಾಗಿ ಅವರಸಿಕೊಂಡು ಬಿಡುತ್ತದೆ. ಈ ಚಲನ ಚಿತ್ರ ವಿವಾಹೇತರ ಸಂಬಂಧದ ಬಗ್ಗೆ ಯಾವುದೇ ಸಂದೇಶ ನೀಡುವುದಿಲ್ಲವಾದರೂ ಮಸಸ್ಸಿನೊಳಗಿನ ಸೂಕ್ಷ್ಮತೆಯನ್ನು ನಿರ್ದೇಶಕರು ತೆರದಿಡುವಲ್ಲಿ ನಿರ್ದೇಶಕರಾದ ಶ್ಯಾಮಸುಂದರ್ ಯಶಸ್ವಿಯಾಗಿದ್ದಾರೆ.
ಈ ಚಲನಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಮತ್ತು ವಿರ್ಮಶೆಗಳು ಬಂದಿದ್ದು ಈ ಚಲನಚಿತ್ರಕ್ಕೆ ರಾಷ್ಟ್ರ ಮಟ್ಟದ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಹಾಗೂ ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಲಭಿಸಿದೆ. ಕೇರಳ ರಾಜ್ಯದ ಎರಡನೇ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿಗಳಿಸಿದೆ.
Subscribe to:
Posts (Atom)
