Popular Posts

Friday, January 21, 2011

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಆಕಾಶದ ನೀಲಿಯಲ್ಲಿ
ಚಂದ್ರತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೊಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೇ ಸಾಕೆ?

    ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರ ಸ್ತ್ರೀ ಎಂಬ ಕವನದ ಸಾಲಿನಲ್ಲಿ ಸ್ತ್ರೀ ಎಂಬ ಬಗ್ಗೆ ಎಷ್ಟೊಂದು ಸೂಕ್ಷ್ಮ ಪದಗಳಲ್ಲಿ ಹೆಣ್ಣಿನ ಅಂತರಂಗದ ಸೂಕ್ಷ್ಮತೆಗಳನ್ನು ಹಾಗೂ ಅನುಭವಗಳನ್ನು ಹೇಳಿರುವುದು ನಿಜಕ್ಕೂ ಕುತೂಲಹಕಾರಿ.

    ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತೇವೆ. ಹೆಣ್ಣು ತಾನು ಹುಟ್ಟುವ ಮನೆಯಿಂದ ಸೇರುವ ಮನೆಯ ತನಕ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಅಕ್ಕ, ತಂಗಿ, ಹೆಂಡತಿ, ತಾಯಿ, ಹೀಗೆ ತನ್ನ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾಳೆ. ಇವು ಅವಳ ಅಂತರಂಗದ ವೈವಿಧ್ಯತೆಗಳನ್ನು ಅವಳ ಭಾವನೆಗಳನ್ನು ಒಂದೊಂದು ಹಂತದಲ್ಲೂ ವಿಶ್ಲೇಷಣೆಗೆಡೆ ಮಾಡಿಕೊಡುವ ಸುಮೂರ್ತ ಸಂದರ್ಭವಾಗಿರುತ್ತದೆ.

    ಭಾರತೀಯ ಧರ್ಮಗಳಲ್ಲಿ ಹೆಣ್ಣನ್ನು ಕ್ಷಮಯ ಧರಿತ್ರಿ ಎಂಬ ಸಾಲುಗಳಿಂದ ಭೂಮಿಗೆ ಹೋಲಿಸುತ್ತಾರೆ. ಅಂತಹ ಪ್ರೇಮ ಹಾಗೂ ವಾತ್ಸಲ್ಯದಿಂದ ಕೊಡಿದ ಹೆಣ್ಣು ನಾನಾ ಘಟ್ಟಗಳಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ಸು ಕಾಣಲು  ಒಂದು ಹೆಣ್ಣು ಹೇಗೆ ಸ್ಪೂರ್ತಿಯೋ ಹಾಗೆ ಪ್ರತಿಯೊಬ್ಬ ಯಶಸ್ಸಿ ಪರುಷನ ಹಿಂದೆ ಒಂದು ಹೆಣ್ಣು ಇರುತ್ತಾಳೆ.

     ಈ ಭೂಮಿಯಲ್ಲಿ  ಪ್ರತಿಯೊಂದು ವಸ್ತುವು ಹೇಗೆ ಒಂದನ್ನೊಂದು ಅವಲಂಬಿಸಿರುತ್ತದೋ ಹಾಗೆ ಹೆಣ್ಣನ್ನು ಒಂದು ಗಂಡು ಅವಲಂಬಿಸಿರುತ್ತಾನೆ. ನೆರಳಿಲ್ಲದೆ ಬೆಳಕಿಲ್ಲ, ಬೆಳಕಿದ್ದಲ್ಲಿ ನೆರಳು ಹಾಗೆ ಹೆಣ್ಣು ಇದ್ದಲ್ಲಿ ಆ ಮನೆ ನಂದಗೋಕುಲ ಈ ಹೆಣ್ಣಿನ ಬಗ್ಗೆ ಹಿಂದಿನಿಂದಲೂ ಕವಿಗಳು ಹಾಡಿ ಹೊಗಳಿರುತ್ತಾರೆ. ಈ ಬಗ್ಗೆ ಕೆ.ಎಸ್,ನರಸಿಂಹಸ್ವಾಮಿಯವರ ಒಂದು ಕವಿತೆ  ಸಾಲು ನೆನಪಾಗುತ್ತದೆ.
    ನಿನ್ನ ನಗೆ ಮಲ್ಲಿಗೆಯ ಪರಿಮಳದ ಪಾತ್ರೆಯಲಿ
    ಚೆಲ್ಲಿಸೂಸುವ ಅಮೃತ ನೀನೇನೆ!
         ನನ್ನ ಕನಸುಗಳೆಲ್ಲ ಕೈಗೊಳ್ಳುವ ಯಾತ್ರೆಯಲಿ
         ಸಿದ್ದಿಸುವ ಧನ್ಯತೆಯು ನೀನೆ.
    ಯಾವಾಗಲೂ ತಾಯಿ ಅಥವಾ ಹೆಣ್ಣು ಎಂಬ ಪದಕ್ಕೆ ವಿಶ್ಲೇಷಣೆ ಮಾಡುತ್ತಾ ಇರುವಂತೆ ಅವಳಲ್ಲಿರುವ ಸೂಕ್ಷ್ಮತೆಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಎಂತಹ ಸಂದರ್ಭಗಳು ಬಂದರೂ ಅಂತಹ ಸಂದರ್ಭಗಳಲ್ಲಿ ತನ್ನ ಅನುಭವವನ್ನು ಗ್ರಹಿಸಿ ಬೌದ್ದಿಕತೆಯಿಂದ ಆ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಲು ಸಮರ್ಥಳಾಗಿರುತ್ತಾಳೆ.

    ತಾಯಿಯೇ ಅತ್ಯಂತ ಶಕ್ತಿಶಾಲೆ ವ್ಯಕ್ತಿ ಎಂದು ಅಂಬೆಗಾಲಿಕ್ಕುವ ಮಗುವು ಯೋಚಿಸುವ ಹಾಗೆ ಜೀವನದಲ್ಲಿ ದೈವೀಕರಣವಾದ ಮನಸ್ಸನ್ನು ಈ ಜಗತ್ತಿನಲ್ಲಿ ಈ ತಾಯಿಗೆ ನೀಡಿದ್ದಾನೆ. ತಾಯಿ ತನ್ನ ಮಗುವಿನ ಬಗ್ಗೆ ಜಿ.ಎಸ್.ಎಸ್.ಕವನದಲ್ಲಿ ಈ ರೀತಿ ಹೇಳುತ್ತಾ ಹೋಗುತ್ತಾರೆ.
    ನನ್ನ ಗರ್ಭದಲ್ಲಿ ಮೂಡಿ ಬರುವಮೊದಲೆಲ್ಲಿ  ಮೊದಲೆಲ್ಲಿ ಇದ್ದೆ ಮಗುವೆ?
          ಯಾವ ರೂಪದಲ್ಲಿ, ಯಾವ ದೇಶದಲ್ಲಿ, ಯಾವ ಹೆಸರಿನಲ್ಲಿ?
          ಎಷ್ಟು ಜನರಲಿ, ಎಷ್ಟು ಯುಗಗಳಲಿ, ತಾರೆ ಗ್ರಹಗಳಲ್ಲಿ
         ಸುತ್ತಿ ಬಂದಯೇ: ಏನು ತಿಳಿಯದೊಲು ಬಂದೆ ನಟಿಸುತಿರುವೆ!

    ಈ ಕವನದ ಸಾಲುಗಳು ಚೆಲುವು ಒಲವು ಕವನ ಸಂಕಲನದಲ್ಲಿ ತಾಯಿ ತನ್ನ ಗರ್ಭದಲ್ಲಿ ಮೂಡಿ ಬರುವ ಮಗುವಿನ ಬಗ್ಗೆ ಅವಳ ಆಲೋಚನೆಗಳನ್ನು ಕವಿಯು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಈ ಕವನದ ಸಾಲುಗಳಲ್ಲಿ ತಾಯಿ ತನ್ನ ಮಗುವಿನ ಸಂಬಂಧದ ಪ್ರಖರತೆಯನ್ನು ತಿಳಿಸುತ್ತದೆ.
    ತಾಯಿಯ ಬಗ್ಗೆ ಸನಾತನ ಧರ್ಮದಿಂದಲೂ ಪೂಜ್ಯ ಭಾವನೆಗಳಿಂದ ಕಂಡುಕೊಂಡು ಬಂದಿದ್ದಾರೆ. ಶಂಕರಚಾರ್ಯರು ತಮ್ಮ ಮಾತೃ ಪಂಚಕಮ್ ನಲ್ಲಿ " ಓ ತಾಯಿ! ನನಗೆ ಜನ್ಮ ನೀಡುವ ಸಮಯದಲ್ಲಿ ನಿನಗುಂಟಾದ ನೋವಾಗಲಿ, ನನ್ನನ್ನು ಹೆತ್ತ ಮೇಲೆ ನಿನ್ನ ದೇಹವನ್ನು ಬಳಸಿಕೊಂಡಿದ್ದು ಒಂದು ವರ್ಷದವೆಗೂ ನನ್ನ ಮಲಮೂತ್ರಾದಿಗಳಿಂದ ಕೂಡಿದ ಹಾಸಿಗೆಯಲ್ಲಿ ನೀನು ಮಲಗಿದ್ದು, ಇದೆಲ್ಲ ಹಾಗಿರಲಿ ನನ್ನನ್ನು ಗರ್ಭದಲ್ಲಿ ಹೊತ್ತು ತಿರುಗಿದ ನಿನ್ನ ಆ ಒಂದು ಕಷ್ಟದ ಖುಣವನ್ನು ಕೂಡ ಈ ಮಗನು ತೀರಿಸಲಾರ ನಿನಗಿದೋ ನನ್ನ ನಮಸ್ಕಾರ" ಎಂದು ಹೇಳುತ್ತಾರೆ. ಪ್ರತಿಯೊಂದು ಹಂತದಲ್ಲೂ  ತಾಯಿ ವ್ಯಕ್ತಿತ್ವ, ಆದರ್ಶ, ಅನುಭವಗಳು ಅವಳಿಗೆ  ಅವಳೇ ಸಾಟಿ ಯಾಗಿರುತ್ತಾಳೆ.

ತಾಯೊಲವೆ ತಾಯೊಲವು ಈ ಲೋಕದೊಳಗೆ
ಕಡಲಿಗೆ ಕಡಲಲ್ಲದುಂಟೆ ಹೋಲಿಕೆಗೆ!
ಓ ಅಮೃತ ಪ್ರೇಮವೇ
ಓ ಮಾತೃ ರೂಪವೇ
ತೀರಲಾದ ತೃಷೆಗೆ ಮರುಜನ್ಮಬೇಕು
ಮತ್ತೋಮ್ಮೆ ಶಿಶುವಾಗಿ ನಾ ನಲಿಯಬೇಕು.

No comments:

Post a Comment