ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು. "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗಳಲ್ಲಿ ಮಕ್ಕಳ ಮನಸ್ಸುನ್ನು ಮುಟ್ಟಬಹುದಾದ ಯಾವುದಾದರೂ ಒಂದು ವಿಷಯ ಇರುತ್ತದೆ.ಮಕ್ಕಳ ಕವಿತೆ ಮಕ್ಕಳ ಮನಸ್ಸಿನಲ್ಲಿ ಉಳಿಯಬೇಕಾದರೆ ನಾಲ್ಕು ಅಥವಾ ಐದು ಪಂಕ್ತಿಗಳಲ್ಲಿ ಬಣ್ಣನೆಯಿರಬೇಕು. ಪ್ರತಿ ಪದ್ಯದಂತ್ಯದಲ್ಲಿ ಪ್ರಾಸವಿರಬೇಕು ಅಂತಹ ಕವಿತೆಗಳ ಪದಬಂಧಗಳೂ, ಪ್ರಾಸಾನುಪ್ರಾಸಗಳು ಎಳೆ ಮಕ್ಕಳ ಕಿವಿ ತುಂಬತ್ತವೆ. ಮಕ್ಕಳ ಸಾಹಿತ್ಯದ ಪಿತಾಮಹ ಪಂಜೇ ಮಂಗೇಶರಾಯರು ಹೇಳಿದಂತೆ ಚುಟುಕಗಳ ಪದಗಳೂ ಪ್ರಾಸಗಳೂ ಕಿವಿ ತುಂಬುವುದಷ್ಟೇ ಅಲ್ಲ, ಕಣ್ಣಿಗೂ ಕಟ್ಟುತ್ತದೆ. ಆ ಕಾರಣವಾಗಿ ಅವು ಮಕ್ಕಳಿಗೆ ಪ್ರಿಯವಾಗುತ್ತದೆ, ಅನಾಯಾಸವಾಗಿ ಅವರಿಗೆ ಕಂಠಪಾಠವಾಗುತ್ತವೆ. ಆಗಲೇ ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಥೆಯಾಗಲಿ, ಕವಿತೆಯಾಗಲಿ ಉಳಿಯುವುದು. ಪಂಜೆಮಂಗೇಶರಾಯರ ನಾಗರಹಾವು ಎಂಬ ಕವಿತೆಯ ಸಾಲು
ನಾಗರ ಹಾವೇ ಹಾವಳು ಹೂವೇ,
ಬಾಗಿಲ ಬಿಲದಲಿ ನಿನ್ನೆಯ ಠಾವೇ
ಇಂತಹ ಪದ್ಯಗಳು ಇವತ್ತು ನಮ್ಮ ಬಾಯಿನಲ್ಲಿ ನಲಿಯುತ್ತದೆ. ಕುವೆಂಪು ರವರ ಬೊಮ್ಮನಹಳ್ಳಿ ಕಿಂದರಜೋಗಿಯ ಬಾಗಿಲ ಬಿಲದಲಿ ನಿನ್ನೆಯ ಠಾವೇ
ತುಂಗಾ ತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ
ಅಲ್ಲಿಯ ಜನಗಳಿಗತಿಗೋಳಾಟ
ಇಲಿಗಳು!
ಬಡಿದವು ನಾಯಿಗಳ!
**** ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ
ಅಲ್ಲಿಯ ಜನಗಳಿಗತಿಗೋಳಾಟ
ಇಲಿಗಳು!
ಬಡಿದವು ನಾಯಿಗಳ!
ರೊಟ್ಟಿ ಅಂಗಡಿ ಕಿಟ್ಟಪ್ಪ!
ನನಗೊಂದುರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಭತ್ತು ಕಾಸಿಗೆ ಕಟ್ಟಪ್ಪ!
ನನಗೊಂದುರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಭತ್ತು ಕಾಸಿಗೆ ಕಟ್ಟಪ್ಪ!
*****
ರಾಜರತ್ನಂ ರವರ ಕಸ್ತೂರಿ ಹೀಗೆ ಊದಿದ್ದೇ ತಡ, ,ಮಕ್ಕಳ ಮುಂದೆ ಜೋಗಿಯ ಕಿಂದರಿ ಬಾರಿಸಿದಂತಾಯಿತು. ತುತ್ತೂರಿ ಮತ್ತು ತುತ್ತೂರಿಯಂತಹ ಇತರೆ ಪದ್ಯಗಳು ಮಕ್ಕಳ ಬಾಯಿಯಲ್ಲಿ ದಿನ ಬೆಳಗಾಗುವುದರಲ್ಲಿ ನಾಡಿನ ಉದ್ದಗಲಕ್ಕೂ ಹರಡಿದವು ಮಕ್ಕಳ ಸಾಹಿತ್ಯದಲ್ಲಿ ರಾಜರತ್ನಂ ಶ್ರೇಷ್ಟ ಸಾಹಿತ್ಯಕಾರರಲ್ಲಿ ಒಬ್ಬರೆನಿಸಿದರು. ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಬೆನ್ನಲ್ಲೇ ಬಂತು ಕಡಲೆಪುರ
ಪುರಿ!ಪುರಿ! ಕಡಲೆಪುರಿ
ಗರಂ ಗರಂ ಕಡಲೆಪುರಿ!
ಎಲ್ಲ ಬನ್ನಿ
ತೆಗೆದು ತಿನ್ನಿ
ಗರಂ ಗರಂ ಕಡಲೆಪುರಿ
ಕಾಸಿಗೊಂದು ಸೇರು ಪುರಿ!
ಕಾಸಿಗೆ ಕೊಂಡನು ಕಸ್ತೂರಿ
ಬೆನ್ನಲ್ಲೇ ಬಂತು ಕಡಲೆಪುರ
ಪುರಿ!ಪುರಿ! ಕಡಲೆಪುರಿ
ಗರಂ ಗರಂ ಕಡಲೆಪುರಿ!
ಎಲ್ಲ ಬನ್ನಿ
ತೆಗೆದು ತಿನ್ನಿ
ಗರಂ ಗರಂ ಕಡಲೆಪುರಿ
ಕಾಸಿಗೊಂದು ಸೇರು ಪುರಿ!
ಹೀಗೆ ಹಲವಾರು ಪದ್ಯಗಳ ಮಕ್ಕಳ ಬಾಯಲ್ಲಿ ಇಂದು ಸಹ ಕೇಳಿ ಬರುತ್ತಿವೆ. ಹಾಗಾಗಿ ಇಂತಹ ಪದ್ಯಗಳಾಗಿ ಇವತ್ತಿಗೂ ನನೆಪಿನಲ್ಲಿ ಉಳಿದೆ. ನಂತರದ ದಿನಗಳಲ್ಲಿ ಲಕ್ಷ್ಮೀನಾರಾಯಣಭಟ್ಟರು, ಸಿದ್ದಯ್ಯಪುರಾಣಿಕರು, ಎಚ್.ಎಸ್.ವೆಂಕಟೇಶಮೂರ್ತಿ, ಶ್ರೀನಿವಾಸ ಉಡುಪ. ಕೆ.ವಿ.ತಿರುಮಲೇಶ್ ಇಂಥ ಕೆಲವು ಹಿರಿಯರು ಮಕ್ಕಳ ಕವನ ಬರೆದರು. ಮಕ್ಕಳ ಕವನವನ್ನು ಬರೆದವರು ಹೆಚ್ಚು ಮಂದಿ ಇಲ್ಲ. ಆದರೆ ಪ್ರಸ್ತುತ ರಾಧೇಶ್ ತೋಳ್ಪಾಡಿಯವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಕ್ಕಳ ಕವಿತೆಗಳ ಬಗ್ಗೆ ಆಸಕ್ತಿ ಕೊಟ್ಟು "ಹಲೋ ಹಲೋ ಚಂದಮಾಮ"ಎಂಬ ಮಕ್ಕಳ ಕವನ ಸಂಗ್ರಹಗಳನ್ನು ಛಂಧ ಪುಸ್ತಕ ಪ್ರಕಾಶನ ಪ್ರಕಟಿಸಿದೆ.
ರಾಧೇಶ್ ತೋಳ್ಪಾಡಿಯವರು ಪ್ರಸ್ತುತ ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಬರೆದ "ಬಿಸಿಲಿನ ದೊರೆಗೆ ನೆರಳಿನ ಮನೆ" ಇವರು ಬರೆದ ಪ್ರಥಮ ಮಕ್ಕಳ ಕವನ ಸಂಗ್ರಹ. ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ಶಿಶುಕಾವ್ಯ ಸ್ಪರ್ಧೆಯಲ್ಲಿ ಇವರ "ರಂಗತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ" (ಪ್ರಥಮ) ಮತ್ತು " ಶಾಲೆಯ ಹುಡುಗರ ಶತಾವತಾರ ಮೇಳ" (ತೃತ್ತೀಯ) ಕವಿತೆಗಳ ಬಹುಮಾನ ಪಡೆದಿದೆ.
ಇವರ ಕವನ ಸಂಕಲನ "ಹಲೋ ಹಲೋ ಚಂದಮಾಮ" ದಲ್ಲಿ ೨೫ ಕವನಗಳಿವೆ ಕೆಲವು ಚುಟುಕ ಶಿಶುಗೀತೆಗಳೂ ಇವೆ. ಕವನಗಳಲ್ಲಿ ತಾಳ, ಲಯ, ಪ್ರಾಸಬದ್ದವಾಗಿದೆ ಬಳಸಿದ ಭಾಷೆಯು ಸರಳವಾಗಿದ್ದು ಮತ್ತೊಮ್ಮೇ ರಾಜರತ್ನಂನ ಕೆಲವು ಕವಿತೆಗಳನ್ನು ನೆನಪಿಸುತ್ತವೆ. ಇವರ ಕವನಗಳಲ್ಲಿ ನಾವು ನೋಡುವ ಕಾಗೆ, ಕೋಳಿ, ಪುಟಾಣಿ ಪಾಪೂ, ಮಳೆ, ಬಾನೂ ಬೆಟ್ಟಗಳ ಕವನಗಳ ವಸ್ತುಗಳಾಗಿ ಬಂದಿರುವುದರಿಂದ ಮಕ್ಕಳ ಮನಸ್ಸುನ್ನು ಗೆಲ್ಲುವಲ್ಲಿ ಯಶಸ್ಸಿಯಾಗಿದೆಯೆಂದು ಹೇಳಬೇಕು ಅವರ ಮಿಂಚಿನ ಹುಳವೇ, ಬಾ!
ಬಾ ಬಾ ಬಾ ಬಾ ಮಿಂಚಿ ಮಿಂಚಿ ಬಾ
ಬಾ ಬಾ ಬಾ ಬಾ ಬೆಳಕೆ ಹಂಚಿ ಬಾ
ಇಣುಕಿ ಹಣಕಿ ಬಾ
ಇರುಳ ಕೆಣಕಿ ಬಾ
ಬೆಂಕಿ ಕಿಡಿಯೇ ರೆಕ್ಕೆ ಪಡೆದು ಬಂದ ಹಾಗೆ ಬಾ
ಮಿಣುಕ ಮಾತೇ, ಬಾ!
ಈ ಕವನವನ್ನು ಓದಿದಾಗ ಎಂತಹ ಬಾಲ್ಯದ ದಿನಗಳ ಮಧುರ ನೆನಪುಗಳ ಕಟ್ಟಿಕೊಡುತ್ತವೆ. ಹಾಗೇಯೇ "ಕೋಳಿ ಕುಮಾರಿಯ ಫ್ಯಾಷನ್ ಶೋ" ಬಾ ಬಾ ಬಾ ಬಾ ಮಿಂಚಿ ಮಿಂಚಿ ಬಾ
ಬಾ ಬಾ ಬಾ ಬಾ ಬೆಳಕೆ ಹಂಚಿ ಬಾ
ಇಣುಕಿ ಹಣಕಿ ಬಾ
ಇರುಳ ಕೆಣಕಿ ಬಾ
ಬೆಂಕಿ ಕಿಡಿಯೇ ರೆಕ್ಕೆ ಪಡೆದು ಬಂದ ಹಾಗೆ ಬಾ
ಮಿಣುಕ ಮಾತೇ, ಬಾ!
ಕೊಕ್ಕಿಗೆ ಕೆಂಪನೆ ಲಿಪ್ ಸ್ಟಿಕ್ ಹಚ್ಚಿ
ರೆಕ್ಕೆಗೆ ಬಣ್ಣದ ಗರಿಗಳ ಚುಚ್ಚಿ
ಲಗುಬಗೆಯಿಂದ ಪುಟು ಪುಟು ಓಡಿ
ಕನ್ನಡಿ ನೀರಲಿ ತನ್ನನೇ ನೋಡಿ
ಪುರ್ರನೆ ಕುಮಾರಿ ಕೊ ಕ್ಕೊ ಕ್ಕೋ
ಮರವನ್ನೇರಿದಳ್ಯಾತಕ್ಕೋ!
ರೆಕ್ಕೆಗೆ ಬಣ್ಣದ ಗರಿಗಳ ಚುಚ್ಚಿ
ಲಗುಬಗೆಯಿಂದ ಪುಟು ಪುಟು ಓಡಿ
ಕನ್ನಡಿ ನೀರಲಿ ತನ್ನನೇ ನೋಡಿ
ಪುರ್ರನೆ ಕುಮಾರಿ ಕೊ ಕ್ಕೊ ಕ್ಕೋ
ಮರವನ್ನೇರಿದಳ್ಯಾತಕ್ಕೋ!
ಇಂದಿನ ದಿನಗಳಲ್ಲಿ ಟಿ.ವಿ.ಗಳಲ್ಲಿ ಕ್ಯಾಟ್ ವಾಕ್ ಅನ್ನು ನಮ್ಮ ಮಕ್ಕಳ ನೋಡಿ ಬೆಳೆಯುತ್ತಿರುವ ಮಕ್ಕಳಿಗೆ ಇಂತಹ ಕವನಗಳು ವಿನೋದ ಸನ್ನಿವೇಶಗಳು ಮಕ್ಕಳ ಕಲ್ಪನೆಯನ್ನು ಗರಿಗೆದರಿಸುತ್ತವೆ. ಇವರ ಕವನಗಳಲ್ಲಿ ನವೀನ ಪ್ರಾಸ ಸಂಯೋಜನೆ, ಸಹಜತೆ, ಸರಳತೆ ಪ್ರಯೋಗಗಳಿಂದ ಮಕ್ಕಳ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ.ಝೆಡ್ ನ ಗೋಳು ಎನ್ನುವ ಕವನದಲ್ಲಿ ಇಂಗ್ಲೀಷ್ ಕೊನೆಯ ಅಕ್ಷರದ ಗೋಳನ್ನು ನವೀನ ರೀತಿಯಲ್ಲಿ ವರ್ಣಿಸಿದ್ದಾರೆ. ವಿಭಕ್ತಿ ಪದ್ಯಗಳಲ್ಲಿ "ಉಸ್ಸಪ್ಪಾಂತ ಹೇಳ್ತೀವಿ" "ಇರಲಿ" "ಹಲೋ ಹಲೋ" ಈ ಪದ್ಯಗಳನ್ನು ಓದುತ್ತಿದ್ದಾರೆ ಮಕ್ಕಳ ಭಾವಭಿನಯನ್ನು ನೋಡಿ ನಲಿಯುವುದಕ್ಕೆ ಅದ್ಭುತ ಕವನಗಳಾಗಿವೆ.
ಒಟ್ಟಾರೆ "ಹಲೋ ಹಲೋ ಚಂದಮಾಮ" ಇಂದಿನ ಪೀಳಿಗೆ ಒಂದು ಉತ್ತಮ ಮಕ್ಕಳ ಕವನ ಸಂಕಲನವಾಗಿ ಮೂಡಿಬಂದಿದೆ. ಈ ಕವನ ಸಂಕಲನ ಬರೆದಿರುವ ರಾಧೇಶ್ ತೋಳ್ಪಾಡಿಯವರು ಸಹ ಮಕ್ಕಳು ಹಾಡಿ ಕುಣಿಯಬಹುದಾದ ಕೆಲ ಸಾಲುಗಳನ್ನು ಸೃಷ್ಟಿಸಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡಂತಿದೆ ಹಾಗೂ ಅವರ ಬಾಲ್ಯದ ದಿನಗಳಿಗೆ ಸಲ್ಲಿಸುವ ಕಾಣಿಕೆಯೂ ಸಹ ಇದಾಗಿದೆ. ಮುಂದೆ ಮಕ್ಕಳಿಗಾಗಿ ಕತೆ, ಕಾದಂಬರಿ, ನಾಟಕ, ಮುಂತಾದ ಹೊಸ ಕೃತಿಗಳನ್ನು ಬರೆಯುವರು ಎಂಬ ಆಶಯದಲ್ಲಿರುತ್ತವೆ. ಈ ಕವನ ಸಂಕಲನವನ್ನು ಈ ಕೆಳಕಂಡ ಪ್ರಕಾಶನದಲ್ಲಿ ದೊರೆಯುತ್ತದೆ ಸಂಪರ್ಕಿಸಿ.
ಛಂದ ಪುಸ್ತಕ ಪ್ರಕಾಶನ
ಐ-004, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-76
ದೂರವಾಣಿ ಸಂಖ್ಯೆ:98444 22782
ಇ-ಮೇಲ್ :vas123u@rocketmail.com
No comments:
Post a Comment