Popular Posts

Friday, January 28, 2011

ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ

ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ.
    ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ ಪ್ರಕೃತಿ ಹಾಗಲ್ಲ ನಾವು ಇದ್ದವೆಂದು ನೀರು ಹರಿಯುವುದು, ಹೂವು ಅರಳವುದು, ಹಕ್ಕಿ ಕೂಗುವುದು, ಬೀಜ ಮೊಳೆಯುವುದು, ಬೆಳಯುವುದು, ಅಳಿಯುವುದು ಯಾವುದನ್ನು ನಿಲ್ಲಿಸುವುದಿಲ್ಲ ಮತ್ತು ಕೇಳುವುದಿಲ್ಲ ಯಾರೋ ಕೀ ಕೊಟ್ಟ ಗಡಿಯಾರದ ತರಹ ಒಂದೇ ಸಮನೆ ನಡೆಯುತ್ತಾ ಇರುತ್ತದೆ? ಈ ಪ್ರಕೃತಿಗೆ ಮಾನವನ ಜೊತೆ ಅವಿನಾಭವ ಸಂಬಂಧ ಹೊಂದಿದ್ದು ಆದರೆ ಈ ಮನುಷ್ಯನ ದುಷ್ಟತನಕ್ಕೆ ಈ ಪ್ರಕೃತಿ ಹೆದರಿ ಅವನ ಮುಂದೆ ಕೈಚಲ್ಲಿ ಕುಳಿತುಬಿಟ್ಟಿದೆ. ಈ ಪ್ರಕೃತಿ ಮುಂದೆ ಮನುಷ್ಯ ಕುಬ್ಜ ಎನ್ನುವುದನ್ನು ಮನುಷ್ಯ ಮರೆತಿದ್ದಾನೆ. ಆದರೂ ಸಹ ಎಲ್ಲವನ್ನು ಜಯಿಸುತ್ತೇನೆ ಎಂಬ ಹಂಬಲಕ್ಕೆ ಬಿದ್ದಾಗ ಆಗಾಗ ಪ್ರಕೃತಿ ಪೆಟ್ಟು ನೀಡುತ್ತಾ ಬಂದಿದೆ. ಇಂತಹ ಸನ್ನಿವೇಶಗಳನ್ನು ಎದುರಿಸಿದರೂ ಮನುಷ್ಯ ತನ್ನ ಪ್ರಕೃತಿಗೆ ಏನನ್ನು ನೀಡಲಾಗುತ್ತಿಲ್ಲವಾದ್ದರಿಂದ ಅವನು ಪ್ರಕೃತಿ ಎದುರು ತನ್ನ ಸೋಲನ್ನು ಒಪ್ಪಿಕೊಳ್ಳುವಂತಾಗಿದೆ.
    ಈ  ವಿಷಯವನ್ನು ಹೇಳಲು ಹೊರಟಿರುವುದು ಯಾತಕ್ಕೆ? ಎಂಬ ಪ್ರಶ್ನೆ ಮೊದಲು ಉದ್ಭವಿಸುತ್ತದೆ. ಆದರೆ ಈ ಪ್ರಕೃತಿಯ ಬಗ್ಗೆ ಏನೆಲ್ಲಾ ಹೇಳಿದರು ಸಾಕಗುವುದಿಲ್ಲ ಹಾಗೂ ಇವತ್ತಿಗೂ ಸಹ ಮನುಷ್ಯ ಪ್ರಕೃತಿಯ ರಹಸ್ಯವನ್ನು ಭೇದಿಸುತ್ತಿದ್ದಂತೆ ಹೊಸ ಹೊಸ ರಹಸ್ಯಗಳು ಹುಟ್ಟಿಕೊಳ್ಳುತ್ತಲೆ ಇದೆ. ಇದೇ ಪ್ರಕೃತಿಯ ಧರ್ಮ. ಆಯಾ ಆಯಾ ದೇಶದ ನೈಸರ್ಗಿಕ ಮೇಲ್ನೋಟಕ್ಕೆ  ಪ್ರಕೃತಿ ಬಹಳ ವಿಶೇಷವಾಗಿ ವಿಶಿಷ್ಟವಾದ ಪ್ರದೇಶಗಳು ರಚನೆಯಾಗಿವೆ. ಈಗ ನಾನು ಬರೆಯ ಹೊರಟಿರುವುದು ಅಂತಹ ಒಂದು ಪುಸ್ತಕದ ಬಗ್ಗೆ ಮೊನ್ನೆ ತಾನೆ ಬಿಡುಗಡೆಯಾದ ಛಂದಪುಸ್ತಕ ಪ್ರಕಾಶನದ ಪ್ರಶಾಂತ್ ಬೀಚಿ ಬರೆದಿರುವ " ಕಿಲಿಮಂಜಾರೋ" ತಾಜಾ ತಾನ್ಜಾನಿಯಾ  ಪುಸ್ತಕದ ಬಗ್ಗೆ. ಪ್ರವಾಸ ಕಥನಗಳು ಕನ್ನಡ ಸಾಹಿತ್ಯದಲ್ಲಿ ಬೇಕಾದಷ್ಟು  ಬಂದು ಹೋಗಿವೆ ಅದರಲ್ಲಿ ಕೆಲವು ಮಾತ್ರ ನೆನಪಿನಲ್ಲಿ ಉಳಿಯುವಂತಹ ಪುಸ್ತಕಗಳು ಇದರಲ್ಲಿ ಎ.ಎನ್.ಮೂರ್ತಿರಾಯರ "ಅಪರ ವಯಸ್ಸಿನ ಅಮೇರಿಕಾ ಯಾತ್ರೆ" ಗೊರೂರು ರಾಮುಸ್ವಾಮಿ ಅಯ್ಯಂಗಾರರ " ಅಮೇರಿಕಾದಲ್ಲಿ ಗೊರೂರು" ಚಂದ್ರಶೇಖರ ಆಲೂರರ "ನೈಲ್ ನದಿಯ ತೀರದಲ್ಲಿ" ಹಾಗೂ ಜಿ.ಎನ್.ಮೋಹನ್ ರವರ "ನನ್ನದೆಯ ಹಾಡು ಕ್ಯೂಬ" ಇದಲ್ಲದೆ ಇನ್ನೂ ಹಲವಾರು ಪುಸ್ತಕಗಳು ಪ್ರಕಟಗೊಂಡಿದ್ದು ಆಫ್ರಿಕಾ ಖಂಡದ ಬಗ್ಗೆ  ಇದುವರೆವಿಗೂ ಯಾವುದೇ ಸಾಹಿತ್ಯಕ್ಕೆ ಮತ್ತು ಪ್ರವಾಸ ಕಥಾನಕ್ಕೆ ಸಂಬಂಧಿಸಿದ ಪುಸ್ತಕಗಳು ಪ್ರಕಟಣೆಗೊಂಡಿಲ್ಲವೆಂದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಪ್ರಶಾಂತ್ ಬೀಚಿಯವರ ಮೊದಲನೆ ಪುಸ್ತಕ "ಲೇರಿಯೊಂಕ"  ಅನುವಾದಿತ ಕಾದಂಬರಿ ಹಾಗೂ ಪ್ರಸ್ತುತ ಈ ಪುಸ್ತಕ ಆಫ್ರಿಕಾದ  ಸಂಸ್ಕೃತಿ, ಜೀವನ, ಪ್ರಕೃತಿ ಇದರ ಬಗ್ಗೆ ತಿಳಿಸಿರುತ್ತಾರೆ.
ಈ ಪುಸ್ತಕ ಪರಿಚಯಕ್ಕಿಂತ ಮೊದಲು ಈ ಲೇಖಕರ ಪರಿಚಯ ಮಾಡಿಕೊಡಬೇಕಾಗುತ್ತದೆ. ಪ್ರಸ್ತುತ  ಈ ಲೇಖಕರು ಪೂರ್ವ  ಆಫ್ರಿಕಾದ ತಾನ್ಜಾನಿಯದ ಅರುಷದಲ್ಲಿ ಬೆನ್ಸನ್ ಇನ್ ಫಾರ್ಮಾಟೆಕ್ ಕಂಪನಿಯ ತಾಂತ್ರಿಕ ಮುಖ್ಯಸ್ಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದು ಅವರ ಎರಡನೇ ಕೃತಿಯಾಗಿದ್ದು "ಲೇರಿಯಾಂಕ" ಅನುವಾದಿತ ಕಾದಂಬರಿಗೆ ಬೇಂದ್ರೆ, ಪರಮೇಶ್ವರ ಭಟ್ಟ ಮತ್ತು ವಸುದೇವ ಭೂಪಾಲಂ ಪುಸ್ತಕ ಬಹುಮಾನಗಳು ದೊರತಿವೆ.
    ಕಿಲಿಮಂಜಾರೋ ಪರ್ವತದ ಬಗ್ಗೆ ಓದುವುದಕ್ಕಿಂತ ಮೊದಲು ಈಗಷ್ಟೇ ಬಿಡುಗಡೆಯಾದ ಎಂಥಿರನ್ ಚಿತ್ರದ ಕಿಲಿಮಂಜಾರೋ, ಕಿಲಿಮಂಜಾರೋ ಹಾಡನ್ನು ನೆನೆಪಿಸಿಕೊಂಡೆ.
    ಕಿಲಿಮಂಜಾರೋ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು  ಮೊದಲನೇ ಭಾಗದಲ್ಲಿ ಕಿಲಿಮಂಜಾರೋ ಪರ್ವತರೋಹಣಕ್ಕೆ ಸಂಬಂಧಿಸಿದಂತೆ ತಮ್ಮ ವಿಶಿಷ್ಟ ಅನುಭವವನ್ನು ಲೇಖಕರು ತೆರೆದಿಡುತ್ತಾರೆ.
    ಪೂರ್ವ ಆಫ್ರಕಾ ಖಂಡದ ತಾನ್ಜಾನಿಯ ದೇಶದಲ್ಲಿ ದೊರೆಯುವ ತಾನ್ಜನೈಟ್ ಹರಳಿನ ಬಗ್ಗೆ ಈ ಹರಳು ವಜ್ರಕ್ಕಿಂತ ಬೆಲೆಬಾಳುವುದು. ಈ ಹರಳನ್ನು ಗುಜರಾತಿನ ವಜ್ರ ವ್ಯಾಪಾರಿಗಳಿಗೆ ಕಳುಹಿಸಿ ಕೆನಡಾ, ಯರೋಪ್ ರಾಷ್ಟ್ರಗಳಿಗೆ ರಫ್ತು  ಮಾಡುವುದರ ಬಗ್ಗೆ ಹಾಗೂ ತಾನ್ಜಾನಿಯದ ರಾಷ್ಟ್ರೀಯ  ಉದ್ಯಾವನ ಗೋರಂಗೋರೊ ಉದ್ಯಾವನ ಪ್ರಪಂಚದ ನೈರ್ಸಗಿಕ ಅದ್ಭುತ ಮತ್ತು  ಕಿಲಿಮಂಜಾರೋ ಪರ್ವತಾರೋಹಣಕ್ಕೆ ಖರ್ಚು ಆಗುವ ವೆಚ್ಚ. ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮ ತಾಪಮಾನದ ಏರುಪೇರುಗಳು, ಪರ್ವತರೋಹಣ ಮಾಡಲು ತೆಗೆದುಕೊಳ್ಳುವ ಸಮಯ ಇವೆಲ್ಲದರ ಬಗ್ಗೆ ವಿವರಿಸಿರುತ್ತಾರೆ.
    ಪರ್ವತರೋಹಣದ ಎರಡನೇ ಹಂತದಲ್ಲಿ ಅರುಷದಿಂದ ಮೋಶಿಗೆ ಮತ್ತು ಮೋಶಿಯಿಂದ ಕಿಲಿಮಂಜಾರೋ ಪರ್ವತದ ತಳಕ್ಕೆ  ಬರಲು ಹಿಡಿಯುವ ಸಮಯ ಸಮುದ್ರ ಮಟ್ಟದಿಂದ ೨೭೦೦ ಮೀಟರ‍್ ಮಂಡಾರ ಹಟ್ ನಲ್ಲಿ ಉಳಿದು ಕೊಂಡಿದ್ದು. ಅಲ್ಲಿನ ಪ್ರಕೃತಿಯ ಬದಲಾವಣೆ ಮತ್ತು ಮಾರನೇ ದಿನ ಹೊರೊಂಬೊ ಗುಡಿಸಿಲಲ್ಲಿ ಉಳಿದಕೊಂಡಿದ್ದು ಆಫ್ರಿಕಾದ ಬಹಳ ಹೆಸರುವಾಸಿಯಾದ "ಸುವನ್ನಾ" ಕಾಡಿನ ಬಗ್ಗೆ .ನಾಲ್ಕನೇ ದಿನ ಪ್ರಯಾಣದಲ್ಲಿ ಮವೇನ್ ಜಿ ಮತ್ತು ಕಿಬೊ ಪರ್ವತದ ಎರಡು ಉನ್ನತ ಸ್ಧಾನಗಳ ಬಗ್ಗೆ. ಝೀಬ್ರಾರಾಕ್ಸ್ ಹತ್ತಿದ್ದು ಕಿಬೊ ಹಟ್ ನಲ್ಲಿ ಉಳಿದು ಕೊಂಡಿದ್ದ ಸಮಯದಲ್ಲಿ ಮಂಜಿನಿ ನೀರಿನಲ್ಲಿ ಅಂಡು ತೊಳೆದು ಕೊಂಡ ಹ್ಯಾಸ ಪ್ರಸಂಗ. ಹನ್ಸ್ ಮೇಹರ‍್ ಗುಹೆಯಲ್ಲಿ ಉಳಿದುಕೊಂಡ ಬಗ್ಗೆ.
ಪರ್ವತರೋಹಣದ ಕೊನೆಯ ಭಾಗದಲ್ಲಿ  ಗಿಲ್ಮನ್ಸ್ ಪಾಯಿಂಟ್ ತನಕ ಪರ್ವತರೋಹಿಗಳು ಬಂದು ಅಲ್ಲಿಂದ ಸಾಗಲಾದರೆ ಹಿಂತಿರುಗಿದ ಪ್ರಕರಣ. ಉಹುರು ಪರ್ವತದಲ್ಲಿ -೨ಡಿಗ್ರಿ ತಾಪಮಾನ ಬಂದಿದ್ದು ಲೇಖಕರು ಹಾಗೂ ಅವರ ಪತ್ನಿ ಈ ಪರ್ವತದ ತುದಿ ತಲುಪುವ ಹೊತ್ತಿಗೆ ಹೈರಾಣಾಗಿದ್ದು. ಆಫ್ರಿಕಾ ಖಂಡ ಅತಿ ಎತ್ತರದ ಸ್ವಾವಲಂಬಿ ಪರ್ವತದ ಮೇಲೆ ನಿಂತು ಕರ್ನಾಟಕದ ಬಾವುಟ ಹಾರಿಸಿದ್ದು  ಒಂದು ಪೂರ್ತಿ ಖಂಡವನ್ನೇ ಮೆಟ್ಟಿ ನಿಂತ ಅನುಭವದ ಬಗ್ಗೆ ಬರೆಯಾಲಾಗಿದೆ.
    ಈ ಎರಡನೇ ಭಾಗದಲ್ಲಿ ಲೇಖಕರು ತಾನ್ಜಾನಿಯ ದೇಶದ ಕಿರುಪರಿಚಯ. ಈ ದೇಶಕ್ಕೆ ತಾನ್ಜಾನಿಯ ಎಂದು ಹೇಗೆ ಹೆಸರು ಬಂತು. ಅಲ್ಲಿನ ಪರ್ವತಗಳು, ರಾಷ್ಟ್ರೀಯ ಉದ್ಯಾವನಗಳು, ದೇಶದ ಅರ್ಥಿಕ ಪರಿಸ್ಧಿತಿ, ರಾಜಕೀಯ, ಮಾಸಾಯಿ ಕಾಡು ಮನುಷ್ಯರ ಆಚಾರ-ವಿಚಾರ, ಆಹಾರದ  ವಿಭಿನ್ನತೆ, ವೈಶಿಷ್ಟತೆ, ಕಾಡುಮನುಷ್ಯರನ್ನು ಭೇಟಿ ಮಾಡಿದ್ದು. ತಾನ್ಜಾನಿಯ ದೇಶಕ್ಕೆ ಹೇಗೆ ಕೆಲಸಕ್ಕೆ ಹೋಗಿದ್ದು ಹೋದಾಗ ಪಟ್ಟ ಪರಿಪಾಟಲು ಹಾಗೂ ಆ ದೇಶದ ಬಡತನ, ನಿರುದ್ಯೋಗ, ವಿದ್ಯಾಭ್ಯಾಸವಿಲ್ಲದೆ ಅಲ್ಲಿನ ಪ್ರಜೆಗಳು ಡ್ರಗ್ಸ್ ಅಭ್ಯಾಸದಿಂದ ಅಲ್ಲಿನ ಜನ ವಿದೇಶ ಮತ್ತು ಸ್ವದೇಶ ಜನಗಳ ಹತ್ತಿರ ಹೊತ್ತಿಲ್ಲದ ಹೊತ್ತಿನಲ್ಲಿ ಸುಲಿಗೆ ಮಾಡುವುದು. ಈ ವಿಷಯದ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಸ್ವತ ಲೇಖಕರೇ ದರೋಡೆಗೆ ಒಳಗಾದ ಅನುಭವಗಳು. ಆಫ್ರಿಕಾ ಖಂಡದ ಜೀವಂತ ಜ್ವಾಲಾಮುಖಿ ಪರ್ವತ ಓಲ್ಡೋ ನಿಯೊ ಲೆಂಗಾಯಿ ಪರ್ವತವನ್ನು ಹತ್ತಿದ್ದು. ಗೋರೊಂಗೋರೋ ರಾಷ್ಟ್ರೀಯ ಉದ್ಯಾವನದಲ್ಲಿ ತಮ್ಮ ಎರಡನೇ ಮಧುಚಂದ್ರವೆಂದು ರಾಷ್ಟ್ರೀಯ ಉದ್ಯಾವನದಲ್ಲಿ ಸಫಾರಿ ಮಾಡಿದ ಬಗ್ಗೆ ಅನುಭವಿಸಿದ ವಿವರಗಳು. ಅಮೇರಿಕಾದಿಂದ ಬಂದು ಸಮಾಜ ಸೇವೆ ಮಾಡುತ್ತಿರುವ ಡಾ:: ಫ್ರಾಂಕ್ ರವರ ಯಶೋಗಾಥೆಯ ಬಗ್ಗೆ. ಒಟ್ಟಾರೆ ಲೇಖಕರ ಕಿಲಿಮಂಜಾರೋ ತಾಜಾ ತಾನ್ಜಾನಿಯ ಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ  ಕೊಡುಗೆಯಾಗಿದ್ದು ಲೇಖಕರು ಇನ್ನೊಂದಿಷ್ಟು ಸಂಕ್ಷೀಪ್ತವಾಗಿ ವಿವರಿಸಿ ಪೋಟೋಗಳೊಂದಿಗೆ ವಿವರ ನೀಡಿದಲ್ಲಿ ಚೆನ್ನಾಗಿರುತ್ತಿತ್ತು.
    ಈ ಕಿಲಿಮಂಜಾರೋ  ಬಗ್ಗೆ  ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಅರ್ನೆಸ್ಟೋ ಹೆಮಿಂಗ್ ವೇಯ " ಸ್ನ್ಸೋ ಆಫ್ ಕಿಲಿಮಂಜಾರೋ" ಎಂಬ ಪುಸ್ತಕದ ಕಥೆಯನ್ನು ಆಳವಡಿಸಿ 1952ರಲ್ಲಿ " ಸ್ನ್ಸೋ ಆಫ್ ಕಿಲಿಮಂಜಾರೋ"  ಎಂಬ ಚಲನಚಿತ್ರವನ್ನು ಅಮೇರಿಕಾದ ನಿರ್ದೇಶಕ ಹೆನ್ರಿ ಕಿಂಗ್ ನಿರ್ದೇಶಿಸಿದ್ದು. ಮುಖ್ಯ ಭೂಮಿಕೆ ಗ್ರೆಗರಿ ಪೆಕ್, ಸುಸಾನ್ ಹೈವಾರ್ಡ್ ಮತ್ತಿತ್ತರು ಅಭಿನಯಿಸಿದ್ದು ಈ ಚಿತ್ರ ಆಕಾಡೆಮಿ ಪ್ರಶಸ್ತಿಗೆ ಉತ್ತಮ ಛಾಯಾಗ್ರಹಣ ಮತ್ತು ಕಲಾ ನಿರ್ದೇಶನಕ್ಕೆ ವಿಭಾಗದಲ್ಲಿ ನಾಮನಿರ್ದೇಶನವಾಗಿತ್ತು.





   

No comments:

Post a Comment