ಬೆಳೆಯುವ ಸಿರಿಯನು ಮೊಳಕೆಯಲಿ ಕಾಣುವವರು.
ಬೆಳೆಯುವ ಸಿರಿಯನು ಮೊಳಕೆಯಲ್ಲಿ ಕಾಣುವವರು. ಈ ವ್ಯಾಕಕ್ಕೆ ಅರ್ಥ ಬರುವಂತೆ ಮಾಡಿರುವುದು ನಮ್ಮ ಛಂದ ಪುಸ್ತಕ ಪ್ರಕಾಶನ. ಛಂದ ಪುಸ್ತಕ ಪ್ರಕಾಶನ ಕಳೆದ ಆರು ವರ್ಷಗಳಿಂದ ಸತತವಾಗಿ ಕನ್ನಡ ಪುಸ್ತಕಗಳನ್ನು ಪ್ರಕಾಶನ ಮಾಡುತ್ತಿದ್ದು ಇದರ ರೂವಾರಿ ಶ್ರೀ ವಸುಧೇಂದ್ರರವರು ಸಾಧನೆ ಶ್ಲಾಘನೀಯ. ಸ್ವತ ಲೇಖಕರು ಆಗಿರುವ ಶ್ರೀ ವಸುಧೇಂದ್ರರವರು ತಮ್ಮ ಪ್ರಕಾಶನದಲ್ಲಿ ಈವರೆವಿಗೂ (ಲೇಖಕರ ಪುಸ್ತಕಗಳನ್ನು ಹೊರತು ಪಡಿಸಿ) ಹದಿನೈದು ಕಥಾಸಂಕಲನ, ಆರು ಪ್ರಬಂಧಗಳು, ಐದು ಕಾದಂಬರಿಗಳನ್ನು ಪ್ರಕಟಿಸಿರುತ್ತಾರೆ. ಶ್ರೀ ವಸುಧೇಂದ್ರರವರು ಈವರೆವಿಗೂ ನಮ್ಮಮ್ಮ ಅಂದ್ರೆ ನಂಗಿಷ್ಟ, ಕೋತಿಗಳು ಸಾರ್ ಕೋತಿಗಳು, ಹಂಪಿಎಕ್ಸೆಪ್ರೆಸ್ಸ್, ಚೇಳು, ಮನೀಷೆ, ಹರಿಚಿತ್ತ ಸತ್ಯ, ಕಥಾ ಸಂಕಲನ, ಪ್ರಬಂಧಗಳು, ಕಾದಂಬರಿಗಳನ್ನು ಪ್ರಕಟಿಸಿರುತ್ತಾರೆ. ಈ ಲೇಖಕರು ತಮ್ಮ ಪುಸ್ತಕಗಳಲ್ಲದೆ ತಮ್ಮ ಪ್ರಕಾಶನದಿಂದ ಹೊಸ ಬರಹಗಾರರಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿ ಹೊಸ ಬರಹಗಾರರ ಪುಸ್ತಕವನ್ನು ಪ್ರಕಟಣೆ ಮಾಡಿದ್ದು. ಈಗಾಗಲೇ ಈ ಪ್ರಕಾಶನದಡಿಯಲ್ಲಿ ಪ್ರಶಾಂತ್ ಬೀಚಿ, ಸಚ್ಚಿದಾನಂದಹೆಗೆಡೆ, ಅಪಾರ, ಸುನಂದಾಪ್ರಕಾಶ ಕಡಮೆ, ಕಾಣದ ರಾಘವ, ಕೀರ್ತಿರಾಜ್, ಹೀಗೆ ಇನ್ನೂ ಹಲವಾರು ಲೇಖಕರನ್ನು ಕನ್ನಡ ಸಾಹಿತ್ಯ ಜಗತ್ತಿಗೆ ನೀಡಿದ್ದು ಇಂತಹ ಪರಿಶ್ರಮ, ಸಾಧನೆ ಮೆಚ್ಚುವಂತಹ ವಿಷಯವಾಗಿದೆ.
ಈಗಾಗಲೇ ಛಂದ ಪುಸ್ತಕ ಪ್ರಕಾಶನದಿಂದ ಹೊರಬಂದ ಪುಸ್ತಕಗಳಾದ "ನಮ್ಮಮ್ಮ ಅಂದ್ರೆ ನಂಗಿಷ್ಟ" ಪುಸ್ತಕವು ಕನ್ನಡ ಸಾಹಿತ್ಯ ಆಕಾಡೆಮಿ, ಡಾ:: ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರತಿಷ್ಟಾನ, ಅಮ್ಮ ಮತ್ತು ಕಥಾರಂಗಂ ಪ್ರಶಸ್ತಿಗಳನ್ನು ಪಡೆದಿದ್ದು ಸುನಂದಾಪ್ರಕಾಶಕಡಮೆರವರ "ಪುಟ್ಟಪಾದದ ಗುರುತು" ಪ್ರಶಾಂತ ಬೀಚಿಯವರ ಲೇರಿಯೊಂಕ ಹೀಗೆ ಹಲವಾರು ಪುಸ್ತಕಗಳು ಪ್ರಶಸ್ತಿಗೆ ಭಾಜನವಾಗಿದೆ. ಇದಲ್ಲದೆ ಪ್ರತಿ ವರ್ಷ ಅತ್ಯುತ್ತಮ ಕಥಾಸಂಕಲನಕ್ಕೆ " ಛಂದ ಪುಸ್ತಕ ಬಹುಮಾನ" ಕೂಡ ನೀಡಲಾಗುತ್ತಿದ್ದು ರೂ ಹತ್ತು ಸಾವಿರಗಳು ನಗದು ಮತ್ತು ಪ್ರಶಸ್ತಿವನ್ನು ಕೊಡಮಾಡುತ್ತದೆ.
ದಿನಾಂಕ:26-01-2011 ರ ಪೂರ್ವಾಹ್ನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಛಂದ ಪುಸ್ತಕ ಪ್ರಕಾಶನ ಬಿಡುಗಡೆಗೊಳಿಸಿದ್ದು ಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ, ಅಮರೇಶನಗುಡೋಣಿ, ಇನ್ನು ಹಲವಾರು ಸಾಹಿತಿಗಳು ಹಾಗೂ ಸಾಹಿತ್ಯಾಸ್ತಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದು ಈ ಸಮಾರಂಭದಲ್ಲಿ ಸುನಂದಾ ಪ್ರಕಾಶ ಕಡಮೆ ರವರ ಕಾದಂಬರಿ" ಬರೀ ಎರಡು ರೆಕ್ಕೇ". ಎಂ.ಆರ್ ದತ್ತಾತ್ರಿಯವರ ಕಾದಂಬರಿ "ದ್ವೀಪವ ಬಯಸಿ", ಪ್ರಶಾಂತ್ ಬೀಚಿಯವರ ಪ್ರವಾಸ ಕಥನ "ಕಿಲಿಮಂಜಾರೋ" ಹಾಗೂ ಕಣಾದ ರಾಘವರವರ ಕಥಾಸಂಕಲ "ಮೊದಲ ಮಳೆಯ ಮಣ್ಣು" ಪುಸ್ತಕಗಳು ಬಿಡುಗಡೆಯಾಗಿದ್ದು. ಕಾಣದ ರಾಘವ ರವರ ಕಥಾಸಂಕಲನವಾದ " ಮೊದಲ ಮಳೆಯ ಮಣ್ಣು" ಈ ಬಾರಿಯ ಅತ್ಯುತ್ತಮ ಕಥಾಸಂಕಲನ ಎಂದು ಛಂದ ಪುಸ್ತಕ ಬಹುಮಾನ ದೊರಕಿತು. ಹಾಗೂ ಈ ಪುಸ್ತಕದ ಮುಖ ಪುಟ ವಿನ್ಯಾಸಕ್ಕೆ ಅತ್ಯಂತ ಉತ್ತಮ ಮುಖಪುಟ ವಿನ್ಯಾಸವೆಂದು ಗುರುತಿಸಲಾಯಿತು.
ಛಂದ ಪುಸ್ತಕ ಪ್ರಕಾಶನ
ಐ-೦೦೧, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-76
ದೂರವಾಣಿ ಸಂಖ್ಯೆ:98444 22782
ಇ-ಮೇಲ್ :vas123u@rocketmail.com
nanu inthaha barahaglannu innnoo hecchu nireekshisutthene
ReplyDelete