ನಾನೇಕೆ ಬರೆಯುತ್ತೇನೆ?
ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್ಲಾಗ್ ಬರೆಯಲು ನಾನು ಅಷ್ಟೊಂದು ಓದಿಕೊಂಡಿರುವವನು ಅಲ್ಲ ಆದರೆ ಈ ಓದುವ ಮತ್ತು ಪುಸ್ತಕದ ಗೀಳನ್ನು ಹತ್ತಿಸಿದೆ ನನ್ನ ಗುರು ರವಿಬೆಳಗೆರೆ ಈ ನನ್ನ ಬ್ಲಾಗ್ ಅನ್ನು ಅರ್ಪಿಸುತ್ತಿದ್ದೇನೆ. ಯಾಕೆಂದರೆ ಓದು ಎಂತಹ ಮನುಷ್ಯನನ್ನು ಬದಲಾವಣೆಗೊಳಿಸುತ್ತದೆ. ಯಾವುದನ್ನು ಓದಬೇಕು? ಹೇಗೆ ಓದಬೇಕು ಎನ್ನುವ ತವಕಕ್ಕೆ ಬಿದ್ದಾಗ ಒಂದರ ಹಿಂದೆ ಒಂದು ಲೇಖಕರ ಪುಸ್ತಕಗಳನ್ನು ತೆಗೆದುಕೊಂಡು ಓದುವ ಗೀಳು ಹತ್ತಿತು. ಇದರಿಂದ ನನ್ನ ವೈಯುಕ್ತಿಕವಾದ ಮನೋಭಿಲಾಷೆಯು ಇತ್ತು ಇದರ ಹಿಂದೆ ಪರಿಚಯವಾದಂತಹ ಲೇಖಕರಾದ ರವಿಬೆಳಗೆರೆ,ಜಯಂತಕಾಯ್ಕಿಣಿ, ವಸುಧೇಂದ್ರ, ವಿವೇಕ ಶಾನಭಾಗ, ಜೋಗಿ, ಕುಂವೀ, ಜಿ.ಎನ್.ಮೋಹನ್, ಮಣಿಕಾಂತ್, ವಿಶ್ವೇಶ್ವರಭಟ್, ನಾಗತಿಹಳ್ಳಿ ಚಂದ್ರಶೇಖರ ಇಂದಿನ ತಲೆಮಾರಿನ ಪುಸ್ತಕಗಳನ್ನು ಒದಿ ಅರಗಿಸಿಕೊಳ್ಳುವ ಹೊತ್ತಿಗೆ ಈ ಹಿಂದಿನ ತಲೆಮಾರಿನ ಲೇಖಕರಾದ ಬೀಚಿ, ಕೈಲಾಸಂ, ರಾಶಿ, ಅ.ರಾ.ಮಿತ್ರ.ಎ.ಎನ್.ಮೂರ್ತಿರಾಯರು, ಕೆ.ಎಸ್.ನರಸಿಂಹಸ್ವಾಮಿ, ಎಸ್.ಎಲ್.ಭೈರಪ್ಪ, ಯಶವಂತಚಿತ್ತಾಲ, ಚದುರಂಗ, ಡಿ.ಆರ.ನಾಗರಾಜ್, ಅವರ ಕಾದಂಬರಿಗಳು,ಲೇಖನಗಳು, ಕವನಗಳು ಹೀಗೆ ಓದುವಾಗ ಕನ್ನಡ ಸಾಹಿತ್ಯದಲ್ಲಿ ಇಷ್ಟೊಂದು ಬರವಣಿಗೆ ಇರಬೇಕಾದರೆ ನಾವು ಬೇರೆ ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳುವುದಕ್ಕಿಂತ ನಮ್ಮ ಸಾಹಿತ್ಯವನ್ನು ಓದು ಒಂದು ಅಭಿಲಾಷೆ ಶುರುವಾಗಿ ಇವತ್ತು ಬರಹ ರೂಪಕ್ಕೆ ಬಂದಿದೆ.
ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?
ಮೂಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು ನೆಲಕೆ ಹಸಿರು ಮೂಡಿತು ಹೇಗೆ?
ಎಂಬ ಜಿ.ಎಸ್.ಶಿವರುದ್ರಪ್ಪನವರ ಕವಿತೆ ಸಾಲುಗಳನ್ನು ನೆನಪಿಸಿಕೊಂಡರೆ ಜಗತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಪ್ರೀತಿ ಇಲ್ಲದೆ ಎಲ್ಲೂ ಏನು ಸಂಭ್ರಮಿಸುವುದಿಲ್ಲ. ಹಾಗೆ ಪ್ರೀತಿಯಿಂದ ಕಲಿತಲ್ಲಿ ಎಲ್ಲವೋ ಸುಲಭ ಮತ್ತು ಸುಂದರ ಈ ಸಾಹಿತ್ಯದ ಬಗ್ಗೆ ನನ್ನ ಸ್ನೇಹಿತರಲ್ಲಿ ಚರ್ಚೆ ಹೊಸ ಹೊಸ ವಿಷಯಗಳ ಬಗ್ಗೆ ಹುಡುಕಾಟ ಇದರಿಂದ ತಿಳಿದಿಲ್ಲದಿರುವ ಎಷ್ಟೋ ವಿಷಯಗಳು ನಮಗೆ ಬೇರೆಯವರಿಂದ ಅಥವಾ ಸ್ನೇಹಿತರಿಂದ ತಿಳಿಯುವುದು. ಈ ವಿಷಯದಲ್ಲಿ ನನ್ನ ಪಾಲಿಗೆ ನನ್ನ ಸ್ನೇಹಿತರು ತುಂಬಾ ಒಳ್ಳೆಯ ಸಲಹೆಗಳನ್ನು ನೀಡಿ ತಮಗೆ ಗೊತ್ತಿರುವುದರ ಬಗ್ಗೆ ಹೆಚ್ಚಿನ ವಿಷಯದ ಬಗ್ಗೆ ಗಮನಹರಿಸಲು ಕಾರಣರಾದ ಅರುಣ್ ಪ್ರಸಾದ್, ವಿನಯಕುಮಾರ, ನಾಗೇಶ, ಆಗಾಗ್ಗೆ ಪುಸ್ತಕವನ್ನು ಸಾಲರೂಪದಲ್ಲಿ ನೀಡಿ ಸಾಹಿತ್ಯದ ಬಗ್ಗೆ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಲು ಕಾರಣನಾದ ಶಿವ ಇವರಿಗೆ ನಾನು ಕೃತಜ್ಞನಾಗಿದ್ದೇನೆ.
Popular Posts
-
ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೊಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ? ರಾಷ್ಟ್ರ ಕವಿ ಜಿ.ಎಸ್.ಶಿವರುದ್...
-
ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು. "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗ...
-
" ಒಲವೇ ಪೂಜೆ , ಇದುವೆ ಅವರ ರಸಜೀವನದ ಓಜೆ" ಸೂಫೀ ಪ್ರೇಮ ಕಾವ್ಯ ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ್ ಖಯ್...
-
ನಾನೇಕೆ ಬರೆಯುತ್ತೇನೆ? ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್...
-
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ...
-
" ಆಧುನಿಕ ಕಾಲ" ಎಂದೆಂದಿಗೂ ಆಧುನಿಕ ಕಾಲವೇ........... ಈ ಲೇಖನ ನನ್ನ ಸ್ನೇಹಿತ ವಿನಯಕುಮಾರ ಎಂ.ಜಿ., ಪ್ರೀತಿಯಿಂದ ಜೋಳಿಗೆ ಬ್ಲಾಗ್ ಗೆ ಬರೆದು ಕೊಟ್ಟಿದ...
-
ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ...
-
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ. ೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್...
-
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್) ಚಿತ್ರ : ಒರೆ ಕಡಲ್ (೨೦೦೭) ಭಾಷೆ: ಮಲಯಾಳಂ. ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ್ ನ...
-
ಈ ಬ್ಲಾಗ್ ಗೆ ಪ್ರೀತಿಯಿಂದ ಜಿ.ಬಿ.ಅರುಣಪ್ರಸಾದ್ ಬರೆದು ಕೊಟ್ಟ ಕಥೆ. ಕನಸಾ ಮಾರುವಾ ಚೆಲುವ..... .. ಮೂರು ತುಂಬುವ ಹೊತ್ತಿಗೆ ಮನೆಯವರಿಗೆ ಬೇಡವಾಗಿದ್ದ ನಾನು ...
gud luck ananth, Start writing,
ReplyDeleteJogi