Popular Posts

Wednesday, January 12, 2011

ನಾನೇಕೆ ಬರೆಯುತ್ತೇನೆ?

ನಾನೇಕೆ ಬರೆಯುತ್ತೇನೆ?
ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್ಲಾಗ್ ಬರೆಯಲು ನಾನು ಅಷ್ಟೊಂದು ಓದಿಕೊಂಡಿರುವವನು ಅಲ್ಲ ಆದರೆ ಈ ಓದುವ ಮತ್ತು ಪುಸ್ತಕದ ಗೀಳನ್ನು ಹತ್ತಿಸಿದೆ ನನ್ನ ಗುರು ರವಿಬೆಳಗೆರೆ ಈ ನನ್ನ ಬ್ಲಾಗ್ ಅನ್ನು ಅರ್ಪಿಸುತ್ತಿದ್ದೇನೆ. ಯಾಕೆಂದರೆ ಓದು ಎಂತಹ ಮನುಷ್ಯನನ್ನು ಬದಲಾವಣೆಗೊಳಿಸುತ್ತದೆ. ಯಾವುದನ್ನು ಓದಬೇಕು? ಹೇಗೆ ಓದಬೇಕು ಎನ್ನುವ ತವಕಕ್ಕೆ ಬಿದ್ದಾಗ ಒಂದರ ಹಿಂದೆ ಒಂದು ಲೇಖಕರ ಪುಸ್ತಕಗಳನ್ನು ತೆಗೆದುಕೊಂಡು ಓದುವ ಗೀಳು ಹತ್ತಿತು. ಇದರಿಂದ ನನ್ನ ವೈಯುಕ್ತಿಕವಾದ ಮನೋಭಿಲಾಷೆಯು ಇತ್ತು ಇದರ ಹಿಂದೆ ಪರಿಚಯವಾದಂತಹ ಲೇಖಕರಾದ ರವಿಬೆಳಗೆರೆ,ಜಯಂತಕಾಯ್ಕಿಣಿ, ವಸುಧೇಂದ್ರ, ವಿವೇಕ ಶಾನಭಾಗ, ಜೋಗಿ, ಕುಂವೀ, ಜಿ.ಎನ್.ಮೋಹನ್, ಮಣಿಕಾಂತ್, ವಿಶ್ವೇಶ್ವರಭಟ್, ನಾಗತಿಹಳ್ಳಿ ಚಂದ್ರಶೇಖರ ಇಂದಿನ ತಲೆಮಾರಿನ ಪುಸ್ತಕಗಳನ್ನು ಒದಿ ಅರಗಿಸಿಕೊಳ್ಳುವ ಹೊತ್ತಿಗೆ ಈ ಹಿಂದಿನ ತಲೆಮಾರಿನ ಲೇಖಕರಾದ ಬೀಚಿ, ಕೈಲಾಸಂ, ರಾಶಿ, ಅ.ರಾ.ಮಿತ್ರ.ಎ.ಎನ್.ಮೂರ್ತಿರಾಯರು, ಕೆ.ಎಸ್.ನರಸಿಂಹಸ್ವಾಮಿ, ಎಸ್.ಎಲ್.ಭೈರಪ್ಪ, ಯಶವಂತಚಿತ್ತಾಲ, ಚದುರಂಗ, ಡಿ.ಆರ.ನಾಗರಾಜ್, ಅವರ ಕಾದಂಬರಿಗಳು,ಲೇಖನಗಳು, ಕವನಗಳು ಹೀಗೆ ಓದುವಾಗ ಕನ್ನಡ ಸಾಹಿತ್ಯದಲ್ಲಿ ಇಷ್ಟೊಂದು ಬರವಣಿಗೆ ಇರಬೇಕಾದರೆ ನಾವು ಬೇರೆ ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳುವುದಕ್ಕಿಂತ ನಮ್ಮ ಸಾಹಿತ್ಯವನ್ನು ಓದು ಒಂದು ಅಭಿಲಾಷೆ ಶುರುವಾಗಿ ಇವತ್ತು ಬರಹ ರೂಪಕ್ಕೆ ಬಂದಿದೆ.
   
ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?
ಮೂಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು ನೆಲಕೆ ಹಸಿರು ಮೂಡಿತು ಹೇಗೆ?

ಎಂಬ ಜಿ.ಎಸ್.ಶಿವರುದ್ರಪ್ಪನವರ ಕವಿತೆ ಸಾಲುಗಳನ್ನು ನೆನಪಿಸಿಕೊಂಡರೆ ಜಗತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಪ್ರೀತಿ ಇಲ್ಲದೆ ಎಲ್ಲೂ ಏನು ಸಂಭ್ರಮಿಸುವುದಿಲ್ಲ. ಹಾಗೆ ಪ್ರೀತಿಯಿಂದ ಕಲಿತಲ್ಲಿ ಎಲ್ಲವೋ ಸುಲಭ ಮತ್ತು ಸುಂದರ ಈ ಸಾಹಿತ್ಯದ ಬಗ್ಗೆ ನನ್ನ ಸ್ನೇಹಿತರಲ್ಲಿ ಚರ್ಚೆ ಹೊಸ ಹೊಸ ವಿಷಯಗಳ ಬಗ್ಗೆ ಹುಡುಕಾಟ ಇದರಿಂದ ತಿಳಿದಿಲ್ಲದಿರುವ ಎಷ್ಟೋ ವಿಷಯಗಳು ನಮಗೆ ಬೇರೆಯವರಿಂದ ಅಥವಾ ಸ್ನೇಹಿತರಿಂದ ತಿಳಿಯುವುದು. ಈ ವಿಷಯದಲ್ಲಿ ನನ್ನ ಪಾಲಿಗೆ ನನ್ನ ಸ್ನೇಹಿತರು ತುಂಬಾ ಒಳ್ಳೆಯ ಸಲಹೆಗಳನ್ನು ನೀಡಿ ತಮಗೆ ಗೊತ್ತಿರುವುದರ ಬಗ್ಗೆ ಹೆಚ್ಚಿನ ವಿಷಯದ ಬಗ್ಗೆ ಗಮನಹರಿಸಲು ಕಾರಣರಾದ ಅರುಣ್  ಪ್ರಸಾದ್, ವಿನಯಕುಮಾರ, ನಾಗೇಶ, ಆಗಾಗ್ಗೆ ಪುಸ್ತಕವನ್ನು ಸಾಲರೂಪದಲ್ಲಿ ನೀಡಿ ಸಾಹಿತ್ಯದ ಬಗ್ಗೆ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಲು ಕಾರಣನಾದ ಶಿವ ಇವರಿಗೆ ನಾನು ಕೃತಜ್ಞನಾಗಿದ್ದೇನೆ.

1 comment: