Popular Posts

Wednesday, February 9, 2011

ಜಾಗತೀಕರಣದ ಜಗತ್ತಿನ ಒಳನೋಟಗಳನ್ನು ಬಿಚ್ಚಿಡುವ ಕಾದಂಬರಿ "ದ್ವೀಪವ ಬಯಸಿ"

ಜಾಗತೀಕರಣದ ಜಗತ್ತಿನ ಒಳನೋಟಗಳನ್ನು ಬಿಚ್ಚಿಡುವ ಕಾದಂಬರಿ "ದ್ವೀಪವ ಬಯಸಿ"
    ಎಂ.ಆರ‍್.ದತ್ತಾತ್ರಿಯವರ "ದ್ವೀಪವ ಬಯಸಿ" ಕಾದಂಬರಿ ಅವರ ಮೊದಲನೇ ಕಾದಂಬರಿ ಈ ಕಾದಂಬರಿಯಲ್ಲಿ ಲೇಖಕರು ಕಷ್ಟಕರವಾದ  ವಸ್ತು ವಿಷಯಗಳನ್ನು ಹೇಳ ಹೊರಟಿರುವುದು. ಜಾಗತೀಕರಣದ ಎಲ್ಲಾ ಬಗೆಯ  ತಲ್ಲಣಗಳನ್ನು ಹೇಳುವುದು ಅತ್ಯಂತ ಸವಾಲದ ಕೆಲಸ ಆದರೆ ಕನ್ನಡ ಕಾದಂಬರಿ ಲೋಕಕ್ಕೆ ಒಂದು ಹೊಸ ವಸ್ತು ವಿಷಯವನ್ನು ಕೊಟ್ಟಿರುವುದು ಈ ಕಾದಂಬರಿಯ ವಿಶೇಷ. ಈಗಾಗಲೇ ಜಾಗತೀಕರಣದಿಂದ ಅಧುನಿಕ ಸಮಾಜದಲ್ಲಿ ಆಗುವ ತಲ್ಲಣಗಳ ಬಗ್ಗೆ ಸಣ್ಣ ಕಥೆಗಳನ್ನು ವಿವೇಕ ಶಾನಭಾಗ ಮತ್ತು ವಸುಧೇಂದ್ರರವರ ಕತೆಗಳಲ್ಲಿ ನಾವು ಕಾಣಬಹುದಾಗಿದೆ. ಆದರೆ ಈ ಕಾದಂಬರಿಯಲ್ಲಿ ಬರುವ ವಸ್ತು ವಿಷಯ ಬಂಡವಾಳಶಾಯಿ ಜಗತ್ತಿನ ಇಂದಿನ ದಿನಗಳಲ್ಲಿ ಮನುಷ್ಯ ಮತ್ತು ಮನುಷ್ಯ ನಡುವಿನ ಸಂಬಂಧವನ್ನು ಸಹ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿರುವುದು. ಈ ವ್ಯವಸ್ದೆಯ ವಿರುದ್ದ ಹೋರಾಟ ಮಾಡುವ ಮಾನವೀಯ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ತಾತ್ವಿಕವಾಗಿ ಯೋಚನೆ ಮಾಡಬೇಕಾದ ಸ್ಧಿತಿ. ಇವೆಲ್ಲದರಿಂದ ಹೊರಬಂದು ಬದುಕುವುದು ಅಸಾಧ್ಯವಾಗಿದೆ. ಜಾಗತೀಕರಣದ ಸಮಸ್ಯೆ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಗ್ರಹಣ ಹಿಡಿದಿಲ್ಲ ಈ ಗ್ರಹಣ ಎಲ್ಲಾ ಕಡೆಯು ಗೋಚರಿಸಿ ಸರಿಪಡಿಸಲು ಸಾಧ್ಯವಿಲ್ಲದಂತಾಗಿದೆ.

    ಈ ಕಾದಂಬರಿಯಲ್ಲಿ ಜಾಗತೀಕರಣ, ಅಧುನೀಕರಣ ಮತ್ತು ಹೊಸ ಶಿಕ್ಷಣ ನೀತಿಯಿಂದ ಉದ್ಯೋಗವಕಾಶಗಳನ್ನು ಹುಡುಕಿಕೊಂಡು ಅಥವಾ ಬಂದಂತಹ ಅವಕಾಶಗಳನ್ನು ಉಪಯೋಗಿಸಿ ವಿದೇಶಕ್ಕೆ ಕೆಲಸಕ್ಕೆ ಹೋಗುವ ಆಕರ್ಷಿಕ ಯುವ ಜನಾಂಗದ ಶ್ರೀಕಾಂತ್ ಮತ್ತು ವಾಣಿಯವರ ಜೀವನದಲ್ಲಿ ನಡೆಯುವ ಅಧುನಿಕ ಸಮಾಜದ ಪಲ್ಲಟಗಳು, ಜಾಗತೀಕರಣ ಅರ್ಥವ್ಯವಸ್ಧೆ ಮತ್ತು ಸಮಕಾಲೀನ ಸಮಸ್ಯೆಗಳನ್ನು ಶ್ರೀಕಾಂತನ ಪಾತ್ರದಲ್ಲಿ ಲೇಖಕರು ಹೊರಚೆಲ್ಲಿದ್ದಾರೆ.

    ಈ ಕಾದಂಬರಿಯಲ್ಲಿ  ಶ್ರೀಕಾಂತ್ ಸಾಮಾನ್ಯ ಹಳ್ಳಿಯಿಂದ ಬಂದಂತಹ ಯುವಕ ತನ್ನ ಮನೆ ಯಗಚಿ ನದಿಗೆ ಅಣೆಕಟ್ಟು ಕಟ್ಟಲು ತನ್ನ ಊರು ಮುಳುಗಿ ಹೋಗುವ ಸಂದರ್ಭದಲ್ಲಿ  ಇಡೀ ಊರಿಗೆ ಊರೇ ಪರಿಹಾರದ ಹಣವನ್ನು ಪಡೆದು ಊರನ್ನು ಖಾಲಿ ಮಾಡಿರುತ್ತಾರೆ. ಆದರೆ ತನ್ನ ತಂದೆ ಅದೇ ಊರಿನಲ್ಲಿ ವೀರಭದ್ರ ಸ್ವಾಮಿ ದೇವಸ್ಧಾನದ ಪೂಜೆ ಮಾಡಿಕೊಂಡು ಅಲ್ಲೆ ಇರುತ್ತಾರೆ. ಶ್ರೀಕಾಂತನು ಬೆಂಗಳೂರಿನಿಂದ ಊರಿಗೆ ಬಂದಾಗ ತಮ್ಮ ಕೃಷ್ಣನು ಶ್ರೀಕಾಂತನಿಗೆ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗು  ಓದಿನಲ್ಲಿ ಸ್ಪಲ್ಪ ಹಿಂದುಳಿದ್ದೇನೆ ಈ ಊರಿನಲ್ಲಿ ನನ್ನ ಸ್ನೇಹಿತರು ಯಾರು ಇಲ್ಲ ನನಗೆ ತುಂಬಾ ಬೇಜಾರಾಗುತ್ತದೆ ಎಂದು ನಿರ್ಭಾವುಕತೆಯಿಂದ ನರಳುವ ತಮ್ಮ ಇದ್ದಕ್ಕಿದ್ದಂತೆ ಯಾರಿಗೂ ಹೇಳದೆ ಮನೆ ಬಿಟ್ಟು ಹೋದಾಗ ಶ್ರೀಕಾಂತನಿಗೆ ಕಾಡುವ ವಿಹಲ್ವತೆ . ನಿರಂತರವಾಗಿ ತಮ್ಮನನ್ನು ಹುಡುಕುತ್ತಿದ್ದ ಶ್ರೀಕಾಂತ ತನ್ನ ಲಾಸ್ ಏಂಜಲೀಸ್ ಕಂಪನಿಯ ತನ್ನ ಮುಖ್ಯಸ್ಧ ಫ್ರಾಂಕೋನ ಕಣ್ಣಲ್ಲಿ ತನ್ನ ತಮ್ಮ ಕೃಷ್ಣನನ್ನು ಕಂಡಾಗ ಉಂಟಾಗುವ ಭಾವೋತ್ಕರ್ಷ ಎಲ್ಲಾ ಸಮಸ್ಯೆಗಳಿಗಿಂತಳು ಪರಸ್ವರ ಸಂಬಂಧಗಳ ಸೂಕ್ಷತೆಗಳನ್ನು ಲೇಖಕರು ತಿಳಿಸಿರುತ್ತಾರೆ.

    ಈ ಕಾದಂಬರಿಯಲ್ಲಿ ಲೇಖಕರು ಬೇರೆ ದೇಶದಿಂದ ಕೆಲಸಕ್ಕೆ ಬಂದಂತಹ ಜನರನ್ನು ಆ ದೇಶದ ಜನ ಹೇಗೆ ನೋಡುತ್ತಾರೆ ಎಂಬುದಕ್ಕೆ " ಸ್ವಂತ ಸುಖಕ್ಕಾಗಿ ತನ್ನೂರಿನಿಂದ ಓಡಿ ಬಂದು ಜೀತದ ಕೆಲಸ ಮಾಡುವ ಒಬ್ಬ ಇಮಿಗ್ರೇಷನ್ ಲಾಯರ‍್ ನಿಂದ ನಾನು ಲೈಫ್ ನ ಇಂಟಿಗ್ರಿಟಿಯ ಬಗ್ಗೆ ಪಾಠವನ್ನು ಕೇಳಬೇಕಾಗಿಲ್ಲ"ಎಂದು ಹೇಳುವ ವಾಸ್ತವಿಕ ದರ್ಶನವನ್ನು ಲೇಖಕರು ಮಾಡಿಸುತ್ತಾರೆ.
    ಎಷ್ಟೋ ವರ್ಷಗಳ ಹಿಂದೆ ಊರು ಬಿಟ್ಟು ಹೋದ ತಾನೇ ನೋಡಿರದ ಚಿಕ್ಕಪ್ಪನನ್ನು ಭೂಷಣ್ ರಾವ್ ನಲ್ಲಿ ಕಾಣುವುದು ಈ ಭೂಷಣ್ ರಾವ್ ನನ್ನ ನಾಗಣ್ಣ  ಚಿಕ್ಕಪ್ಪನೆಂದು ಸಂಬಂಧಗಳನ್ನು ಕಲ್ಪಿಸಿಕೊಂಡಾಗ ಮನಸ್ಸಿಗೆ ಆಗುವ ದುಗಡಗಳು. ಮಹಿಂದಾ ಮತ್ತು ಶ್ರೀಕಾಂತ ನಡುವೆ ನಡೆಯುವ ಮಾತುಕತೆಯಲ್ಲಿ ಲೇಖಕರು ಸಂವೇದನಶೀಲರಾಗಿ ಭಾವನೆಗಳನ್ನು ಸೂಕ್ಷ್ಮವಾಗಿ ತೆರೆದಿಡುತ್ತಾರೆ.

    ಜೆನ್ ಸನ್ ಎನರ್ಜಿ ಲೇ ಆಫ್ (ಮುಚ್ಚುವ) ಸಂದರ್ಭದಲ್ಲಿ ಆ ಕಂಪನಿಯ ಕೆಲಸಗಾರರ ಮನಸ್ಸಿನ ಸ್ಥಿತ್ಯಂತರವನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸುಖವನ್ನಷ್ಟೇ ಅನುಭವಿಸಿ ಅಭ್ಯಾಸವಿರುವ ಅಮೇರಿಕಾದವರು ದು:ಖಗಳನ್ನು ಎದುರಿಸುವಾಗಲಿನ ಮನಸ್ಧಿತಿ ಅವರಗಿಲ್ಲದಿರುವ ಬಗ್ಗೆ . ಈ ಸನ್ನಿವೇಶಗಳಿಂದ ಶ್ರೀಕಾಂತ್ ಮತ್ತು ಮಿಲಿಂದ ಹೊರಬರುವ ಪ್ರಯತ್ನದಲ್ಲಿ ತೋರುವ ಆತ್ಮಸ್ಧೈರ್ಯ, ಜೀವನಾಸಕ್ತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಮಾರ್ಗ. ಫ್ರಾಂಕೋನನ್ನು ಕೆಲಸದಿಂದ ತೆಗೆದುಹಾಕಿದಾಗ ತನ್ನ ತಮ್ಮ ಕೃಷ್ಣನನ್ನು ಕಳೆದುಕೊಂಡ ಅಸಹಾಯಕತೆ. ಯೊಸೆಮಿಟಿಯಲ್ಲಿ  ಕಾಲ ಕಳೆಯುವಾಗ ವಾಣಿ ಹೇಳುವ "ಲೈಫ್ ಆಫ್ ಪೈ" ಕಥೆ ಕಥೆಯಾಗದೆ ಮನಸ್ಸಿನಲ್ಲಿ  ಉಳಿಯುತ್ತದೆ.

    ಪೆಟ್ರೋಲ್ ದರ ಜಾಗತಿಕ ಮಟ್ಟದಲ್ಲಿ ಏರಿಕೆ ಇಳಿಕೆ ಹಿಂದೆ ಇರುವ ಮುಂದುವರೆದ ರಾಷ್ಟ್ರಗಳ ಹಿಡಿತದ ಅಲ್ಲಿನ ರಾಜಕೀಯ ಒಳನೋಟಗಳು ಬಗ್ಗೆ ಸವಿರವಾಗಿ ವಿವರಿಸಿರುವುದು.ಮಹಿಂದಾ ಅಪಘಾನಿಸ್ತಾನಕ್ಕೆ ಹೋಗುವುದನ್ನು ತಡೆಯಲು ಶ್ರೀಕಾಂತ್ ಅಸಹಾಯಕನಾಗುವುದು. ಮಹಿಂದಾ ಅಪಘಾನಿಸ್ತಾನದಲ್ಲಿ ಮರಣಹೊಂದಿದಾಗ ಕಾಡುವ ತಪ್ಪಿಸ್ಧ ಭಾವನೆ. ಸಮಿಂದ ಮಧುರ ಸಿಂಘೆಯವರು ಮಹಿಂದಾ ದಿನಚರಿಯನ್ನು ಕೊಟ್ಟು ಓದಲು ಹೇಳಿದಾಗ ಯುದ್ಧ ಸೃಷ್ಟಿಸಿರುವ ಪರಿಸ್ಧಿತಿ ಕ್ರೌರ್ಯ ಇವುಗಳನ್ನು ಅಲ್ಲಲ್ಲಿ ಲೇಖಕರು ವಿವರಿಸಿರುವ ರೀತಿ, ಪುಲಿಟ್ಜರ‍್ ಪ್ರಶಸ್ತಿ ಪಡೆದ ಪೌಲ್ ವ್ಯಾಟನ್ಸ್ ಬಗ್ಗೆ ಸೂಕ್ಷ್ಮ ವಿವರಣೆ. ( ನ್ಯೂಸ್  ಚಾನೆಲಗಳು ಸುದ್ದಿಗಾಗಿ ಕಚ್ಚಾಡುವ ರೀತಿ) ಅಮೇರಿಕಾ ಯೂನಿಯನ್ ಟ್ರೇಡ್ ಗಳ  ಮಾಲೀಕರ ಮತ್ತು ಕಾರ್ಮಿಕರ ನಡುವಿನ ಸಂಘರ್ಷ. ಕೊನೆಯ ಬಾರಿ ಫ್ರಾಂಕೋ ಭೇಟಿ ಮಾಡಲು ಹೋದಾಗ ಲೇಖಕರು ಅಲ್ಲಿನ ಪ್ರಕೃತಿಯನ್ನು ಮರ್ಲಿನ್ ಮನ್ರೋ ಜೊತೆ ಹೋಲಿಸಿ ನೋಡುವ ಅದ್ಭುತ ವರ್ಣನೆ. ಫ್ರಾಂಕೋ ಮತ್ತು ಲೀಸಾ ಸಂಬಂಧದಲ್ಲಿ  ಲೀಸಾಗೆ ಕೊಂಡುಕೊಳ್ಳುವ ಪ್ರವೃತ್ತಿಗೆ ಒಳಗಾಗಿ ಫ್ರಾಂಕೋ ಹೇಳುವ ಮಾತು "ಬರಬರುತ್ತ ನಾನು ಮನೆಯ ಹತ್ತು ಸಾವಿರ ವಸ್ತುಗಳ ನಡುವೆ ಅನಾಥನಾಗಿ ಬಿಟ್ಟೆ" ಎಂದು ಲೇಖಕರು ವಿದೇಶಿಯರ ಮನೋಧರ್ಮವನ್ನು ವಿವರಿಸುತ್ತಾರೆ. " ಸಾಂಟಾ ಅನಾ ಬಿರುಗಾಳಿ" ಯ ಬಗ್ಗೆ  ಕೃಷ್ಣ ಮತ್ತು ತನ್ನ ಚಿಕ್ಕಪ್ಪನನ್ನು ಬೇರೆಯವ ಕಣ್ಣಲ್ಲಿ ಹುಡುಕಲು ಹೋದ ಲೇಖಕರು ಹೀಗೆ ಹೇಳುತ್ತಾರೆ. " ಯಾರನ್ನಾದರೂ ಹುಡಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವನ್ನೆಉವ ಭ್ರಮೆಯಲ್ಲಿ ಬೀಳುತ್ತವೆ.

    ಒಟ್ಟಾರೆ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರವು ವಿಭಿನ್ನತೆ ಹೊಂದಿದ್ದು ಜಾಗತೀಕರಣದ ನಡುವೆ ಮನುಷ್ಯ ಮತ್ತು ಮನುಷ್ಯನ ನಡುವೆ ಪ್ರೀತಿ, ವಿಶ್ವಾಸ, ಸಂಬಂಧಗಳ ಸಂಕೀರ್ಣತೆಯನ್ನು, ಸೂಕ್ಷ್ಮ ಸಂವೇದನೆಗಳನ್ನು ಆಪ್ತವಾಗುವಂತೆ ಅರ್ಥವತ್ತಾಗಿ ಹೇಳಿಕೊಂಡು ಹೋಗಿರುವುದು ಲೇಖಕರ ಬರವಣಿಗೆಯ ಮೇಲಿರುವ ಹಿಡಿತವನ್ನು ತೋರಿಸುತ್ತದೆ. ಅಲ್ಲಲ್ಲಿ ಲೇಖಕರು ಕಾದಂಬರಿ ಕನ್ನಡ ಸಾಹಿತ್ಯಲೋಕದಲ್ಲಿ ಹೊಸತನವನ್ನು ತುಂಬಿದ್ದು ಈ ಕಾದಂಬರಿ ವಸ್ತುವಿನ ವಿಶೇಷತೆಯಾಗಿರುತ್ತದೆ.


   

Tuesday, February 1, 2011

ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ.

ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ.
   ೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್ತುತ ಬೆಂಗಳೂರು ಜನಸಂಖ್ಯೆಯಲ್ಲಿ ಶೇಕಡ ೬೮ರಷ್ಟು ಜನ  ಹೊರಗಿನ ರಾಜ್ಯಗಳಿಂದ ಬಂದವರು ಇನ್ನು ೩೨ ಶೇಕಡ ಮಾತ್ರ  ಕನ್ನಡಿಗರಿದ್ದು ಹೊರಗಿನಿಂದ ಬಂದ ಜನಗಳಿಗೆ ಕನ್ನಡದ  ಬಗ್ಗೆ   ಅಕ್ಕರೆ ಇದಯೇ? ಎಂಬ ಪ್ರಶ್ನೆ ಉದ್ಭವಿಸುವುದು ಆದರೆ  ಪ್ರಸ್ತುತ  ಕನ್ನಡ  ನಾಡು ಮತ್ತು ಸಾಹಿತ್ಯದ ಬಗ್ಗೆ ಜಾಗ್ರತೆವಹಿಸ ಬೇಕಾಗಿರುವ ನಾವು ಅಂತಹ ಕೆಲಸವನ್ನೇನು ಮಾಡುತ್ತ ಕುಳಿತು ಕೊಂಡಿಲ್ಲ ಹಿಂದಿನವರು  ಈ ನಾಡು ನುಡಿಗೆ ಮಾಡಿದ ತ್ಯಾಗ ಸೇವಾ ಮನೋಭಾವನೆ ಇಂದಿನ ದಿನಗಳಲ್ಲಿ ಇಲ್ಲ ಎನ್ನುವುದು ಒಂದು ದೊಡ್ಡ ಕೊರತೆಯಾಗಿದೆ. ಹಚ್ಚೆವು ಕನ್ನಡದ ದೀಪ ಕರುನಾಡು ದೀಪ ಎಂದು ನಿರಂತರವಾಗಿ ಕನ್ನಡ ಸಾಹಿತ್ಯ ದ ರಥವನ್ನು  ಎಳೆದ ತಮ್ಮ ಜೀವನವನ್ನೇ ಕನ್ನಡ ನಾಡು ನುಡಿ ಸಾಹಿತ್ಯಕ್ಕೆ ಮುಡಿಪಾಗಿಟ್ಟ ಹಲವಾರು ಮಹನೀಯರನ್ನು ಇಂದು ನಾವು ನೆನಪನ್ನು ಮಾಡಿಕೊಳ್ಳಬೇಕಾದ ಪ್ರಾತ:ಸ್ಮರಣೀಯರಲ್ಲಿ  ಆಲೂರುವೆಂಕಟರಾಯರು, ಎ.ಆರ‍್ ಕೃಷ್ಣಶಾಸ್ತ್ರಿ, ಗಳಗನಾಥರು, ಅ.ನ.ಕೃ, ಜಿ.ಪಿ.ರಾಜರತ್ನಂ, ರಾ.ಹ.ದೇಶಪಾಂಡೆ, ಶಂಭಾಜೋಶಿ, ವಿ.ಸೀತರಾಮಯ್ಯ, ಕುವೆಂಪು ಇನ್ನು ಮುಂತಾದವರು ನನೆಪಿನ ಮರೆವಣಿಗೆಯೇ  ಇದೆ.
    ಇಂತಹ ಮಹಾನೀಯರನ್ನು  ನೆನಪಿಸಿ ಕೊಳ್ಳುವ ಒಂದು ಪ್ರಯತ್ನ  ಇಲ್ಲಿ  ಮಾಡಲಾಗಿದೆ. ಎ.ಆರ‍್.ಕೃಷ್ಣ ಶಾಸ್ತ್ರಿಗಳು  ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಕನ್ನಡ ಸಂಘವನ್ನು  ಸ್ದಾಪನೆ ಮಾಡಿ "ಪ್ರಬುದ್ಧ ಕರ್ಣಾಟಕ" ಎಂಬ  ತ್ರೈಮಾಸಿಕ ಪತ್ರಿಕೆ  ಆರಂಭಿಸಿದ್ದು  ಕನ್ನಡ ಸಾಹಿತ್ಯಕ್ಕೆ ಹೊಸ ಲೇಖಕರನ್ನು ಪರಿಚಯಿಸಿದ್ದು ಈ ಬಗ್ಗೆ ಡಿ.ವಿ.ಗುಂಡಪ್ಪನವರು  ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರದಲ್ಲಿ  ದಿನಾಂಕ:೬-೦೫-೧೯೩೫ರಲ್ಲಿ ನಡೆದ ವಿಶೇಷ ಸಾಹಿತ್ಯೋತ್ಸವದ ಸಮಾರಂಭದ ಉಪಾಧ್ಯಕ್ಷ  ಸ್ಧಾನದಿಂದ ಮಾಡಿದ ಭಾಷಣದ ಪ್ರತಿರೂಪವನ್ನು ಇಲ್ಲಿ ನೀಡಲಾಗಿದೆ. " ಕನ್ನಡದಲ್ಲಿ ಓದುಗರ ಸಂಖ್ಯೆ ಬೆಳೆಯುತ್ತಿಲ್ಲ. ಪುಸ್ತಕಗಳಗಳನ್ನು ಕೊಳ್ಳುವರ ಸಂಖ್ಯೆ ಬೆಳೆದ ಹೊರತು, ಪುಸ್ತಕಗಳನ್ನು ಬರೆಯುವರ ಸಂಖ್ಯೆಯಾಗಲಿ ಅಥವಾ ಬರೆದ ಪುಸ್ತಕದ ಯೋಗ್ಯತೆಯಾಗಲಿ ಹೆಚ್ಚಲಾರದು ಬಹು ಮಂದಿ ಓದುವವರು ಸಿಕ್ಕಿಯಾರು, ಶ್ರಮಕ್ಕೆ ತಕ್ಕಫಲ ದೊರೆತೀತು ಎಂಬ ಭರವಸೆ ಕಂಡ ಹೊರತು ಸಮರ್ಥರಾದವರು ಗ್ರಂಧ ಲೇಖನಕ್ಕೆ  ಕೈ ಹಾಕಲಾರರು, ಗಿರಾಕಿಗೆ ತಕ್ಕಂತೆ ಸರಬರಾಯಿ ಎಂಬುದು ಸ್ವತಸ್ಸಿದ್ದ ನ್ಯಾಯ ಅದಕಾರಣ, ಕನ್ನಡ ಮಹಾಜನರು ತಮ್ಮ ಭಾಷೆಯ ಮೇಲ್ಮೆಯನ್ನು ಬಯಸುವುದು ದಿಟವಾದರೆ ಅವರಲ್ಲಿ ಅಕ್ಷರಸ್ಧರಾದವರೆಲ್ಲರೂ ತಮ್ಮ ಆದಾಯದಲ್ಲಿ ಒಂದು ಖಚಿತವಾದ ಭಾಗವನ್ನು ಪುಸ್ತಕ ಸಂಗ್ರಹಕ್ಕೆ ಮೀಸಲಿಡಬೇಕು. ಸಾಮಾನ್ಯವಾಗಿ ತಿಂಗಳಿಗೆ ೨೦ ರೂಪಾಯಿಗಳ ವರಮಾನ ಇರತಕ್ಕವರು ಅದರಲ್ಲಿ ಎಂಟು ಅಣೆಯನ್ನಾದರೂ ಒಂದು ಗ್ರಂಧಕ್ಕೆ ವಿನಿಯೋಗಿಸಲು ಮನಸ್ಸು ಮಾಡಬೇಕು ಹಾಗಾಗಾದ ಹೊರತು ಕನ್ನಡ ಸಾಹಿತ್ಯ ಉಚ್ಛ್ರಾಯ ಸ್ಧಿತಿಗೆ ಬರುವುದೆಂಬ ಆಸೆಗೆ ಕಾರಣವಿರಲಾರದು."
    ಈ ಪ್ರಸಂಗವನ್ನು  ಬಿ.ಎಸ್. ಕೇಶವರಾವ್ ರವರು ಬೀಚಿ, ಬುಲೆಟ್ಸು ಬಾಂಬು ಭಗವದ್ಗೀತೆ ಎಂಬ ಪುಸ್ತಕದ     "ಸಾಹಿತ್ಯ ಸೈಂಧವನ ಸಾನಿಧ್ಯದಲ್ಲಿ ಆರಿಸಿಕೊಳ್ಳಲಾಗಿದೆ. ಬೀಚಿ ಮತ್ತು ಕಾಳಿಂಗರಾಯರು ಬಳ್ಳಾರಿ ಸುಡು ಬೇಸಿಗೆಯ ದಿನಗಳು ಅಲ್ಲೊಂದು ಪುಸ್ತಕ ಅಂಗಡಿ ಆ ಅಂಗಡಿಯ ಮುಂದಿದ್ದ ಬೆಂಚೊಂದರ ಮೇಲೆ ಏನನ್ನೋ ಹರಟುತ್ತರಾ ಕುಳಿತಿದ್ದಾರೆ. ಆಗ ಒಬ್ಬ ವೃದ್ದ ಆ ಅಂಗಡಿಯ ಮುಂದೆ ಬಂದು ನಿಂತ. ವಯಸ್ಸಿನಿಂದ ಸುಕ್ಕುಗಟ್ಟಿದ ಆತನ ಮುಖ ಆ ರಣಬಿಸಿಲಿನ ತಾಪದಲ್ಲಿ ಬೆಂದು ಮತ್ತಷ್ಟು ಮುದುಡಿಕೊಂಡಿತ್ತು. ಅವನು ಉಟ್ಟಿದ್ದ ಉಡುಗೆಯೆಂದರೆ ಒಂದು ತುಂಡು ಪಂಚೆ ಹಾಗೂ ತಲೆಗೆ ಸುತ್ತಿಕೊಂಡಿದ್ದ ಒಂದು ಕೆಂಪು ವಸ್ತ್ರ, ಅದೂ ಮಾಸಲಾಗಿ ಅಲ್ಲಲ್ಲಿ ಹರಿದು ಜೂಲಗಿತ್ತು. ಬೆಂದ ಭೂಮಿಯ ಮೇಲೆ ಬರಿಗಾಲಿನಲ್ಲಿ ನಡೆಯುತ್ತಿದ್ದ ಆತನ ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು ರಕ್ತ ಒಸರುವಂತೆ, ಹೆಗಲ ಮೇಲೆ ಸುಮಾರು ಗಾತ್ರದ ಅರೆತುಂಬಿದ ಒಂದು ಗೋಣಿಚೀಲದ ಮೂಟೆ.
    ಹೀಗೆ ಆ ಮೂಟೆಯನ್ನು ಹೊತ್ತು ತಮ್ಮೆದುರು ಬಂದು ನಿಂತು ಆ ವ್ಯಕ್ತಿಯನ್ನು ಬೀಚಿಗೆ ಹಾಗೂ ಕಾಳಿಂಗರಾಯರು ಯರೋ ಭಿಕ್ಷುಕನಿರಬೇಕೆಂದು ಭಾವಿಸಿದರು. ಇವರು ಆತನಿಗೆ ಭಿಕ್ಷೆ ಎಂಬಂತೆ ಮೂರು ಕಾಸನ್ನೋ, ಆರು ಕಾಸನ್ನೋ ಚಿಮ್ಮಬೇಕೆನ್ನುವಷ್ಟರಲ್ಲಿ ಆ ಮುದುಕ ಮುಂಬಂದು ಬಹು ನಮ್ರತೆಯಿಂದ " ಒಂದಿಷ್ಟು ಕನ್ನಡ ಪುಸ್ತಕಗಳಿವೆ, ಹೊಸಾವು ಕೋಳ್ತಿರೇನು? ಉಪಯೋಗಕ್ಕೆ ಬಂದಾವು" ಎಂದ. ಅವು ಯಾವುವೋ, ತೂಕಕ್ಕೆ ಹಾಕಬಹುದಾದ ಪುಸ್ತಕಗಳಿರಬಹುದೆಂದು ಭಾವಿಸಿದ ಬೀಚಿ ತಮಗವು ಬೇಡವೆಂದು ತಲೆಯಾಡಿಸಿ ಮುಂದೆ ಹೋಗುವಂತೆ ಕೈಬೀಸಲು ಹತಾಶನಾದ ಆ ಮುದುಕ ಆಯ್ತೂ ದೇವ್ರೂ ಬರತೀನಿ ಎಂದು ಹೊರಟು ಹೋದ. ಇದೆಲ್ಲಾ ಆದದ್ದು ಆ ದಿನ ಮಧ್ಯಾಹ್ನ ಎರಡು ಘಂಟೆಯ ಹೊತ್ತಿನಲ್ಲಿ.
    ಆ ಮುದುಕ ಅತ್ತ ಹೋದ ನಂತರ ಇತ್ತ ಬೀಚಿ ಹಾಗೂ ಕಾಳಿಂಗರಾಯರು ಆ ಅಂಗಡಿ ಮಾಲೀಕನ ಮನೆಯಲ್ಲಿ ಊಟಮಾಡಿ, ವಿಶ್ರಾಂತಿ ಪಡೆದು, ಸಾಯಂಕಾಲವಾಗುತ್ತ ಬಳ್ಳಾರಿಯ ಅಂಚಿನಲ್ಲಿರುವ ಕೆರೆಯ ದಂಡೆಯ ಮೇಲೆ ಅಡ್ಡಾಡಿ ಬರಲು  ಹೋದಾಗ ಕಂಡದ್ದಾದರೂ ಏನನ್ನು? ಮಧ್ಯಾಹ್ನ ಕಂಡಿದ್ದ ಅದೇ ಮುದುಕ ಈಗ ಕೆರೆಯಲ್ಲಿ ಕೌಪೀನಧಾರಿಯಾಗಿ, ಆಗಷ್ಟೇ ಸಾನ್ನಮಾಡಿ, ತಲೆಗೆ ಸುತ್ತಿದ್ದ ಕೆಂಪು ವಸ್ತ್ರವನ್ನೂ, ಪಂಚೆಯಂತೆ ಉಟ್ಟಿದ್ದ ಮಾಸಲು ಧೋತ್ರವನ್ನೂ ನೆನಸಿ ಕೆರೆಯ ಸೋಪಾನದ ಮೆಟ್ಟಿಲ ಮೇಲೆ ಕಸಕುತ್ತಿರುವುದು ಕಂಡು ಬಂತು. ಅವನು ಹೆಗಲ ಮೇಲೆ ಹೊತ್ತುಕೊಂಡಿದ್ದ ಮೂಟೆ ಇನ್ನೊಂದು ಮೆಟ್ಟಿಲ ಮೇಲೆ!
ಬೀಚಿ ಹಾಗೂ ರಾಯರು ಕುತೂಲಹದಿಂದ ಅವನತ್ತ ನೋಡುತ್ತಿರಲು, ಆ ಮುದುಕ ಒಗೆದಿದ್ದ ವಸ್ತ್ರಗಳನ್ನು ಅಲ್ಲೇ ಮೆಟ್ಟಿಲಗಳ ಮೇಲೆ ಹರವಿ ಅನಂತರ ಕೆರೆ ಅಂಚಿನ ಬಳಿ ಕುಳಿತು ಸಂಧ್ಯಾವಂದನೆಯನ್ನು ಮಾಡಲಾರಂಭಿಸಿದ. ಅವನನ್ನೇ ನೋಡುತ್ತಿದ್ದ ಇವರಿಬ್ಬರಿಗೆ ಕುತೂಹಲ ಮತ್ತಷ್ಟು ಕೆರಳಿತು " ಪಾಪ ಕರ್ಮಠ ಬ್ರಾಹ್ಮಣಾನ್ಸುತ್ತೇ ಬೀಚಿ! ಯರೋ ಏನೋ, ಈತನ ಪೂರ್ವಾಪರಗಳನ್ನು ವಿಚಾರಿಸಿಯೇ ಬಿಡೋಣ. ಎಂದು ಕಾಳಿಂಗರಾಯರೆನ್ನಲು ಬೀಚಿ ಹೂಂಗುಟ್ಟಿದರು.
    ಆ ಮುದುಕ ಸಂಧ್ಯಾವಂದನೆಯನ್ನು  ಮುಗಿಸವುದನ್ನೇ ಕಾಯುತ್ತಿದ್ದರು. ಮುಗಿಯಿತು. ಮುದುಕ ಐದಾರು ಮೆಟ್ಟಿಲಗಳನ್ನೇರಿ ತಾನು ಅಲ್ಲಿರಿಸಿದ್ದ ಮೂಟೆಯ ಬಾಯಿಗೆ ಕಟ್ಟಿದ್ದ ಸುತ್ತಲಿಯನ್ನು ಬಿಚ್ಚಿ ಒಳಗಿದ್ದ ಪುಸ್ತಕಗಳನ್ನು ಜೋಪಾನವಾಗಿ ಹೊರತೆಗೆದು ಅಲ್ಲೇ ಪಕ್ಕಕ್ಕಿರಿಸಿ, ಅವುಗಳಲ್ಲಿ ಎಷ್ಟು ಖರ್ಚಾಗಿವೆ ಎಂದು ಎಣಿಸುತ್ತಿರುವಾಗ ಇದನ್ನೆಲ್ಲಾ ಮೇಲೆ ನಿಂತು ಗಮನಿಸುತ್ತಿದ್ದ ಬೀಚಿ ಹಾಗೂ ಕಾಳಿಂಗರಾಯರಿಗೆ ಆ ಪುಸ್ತಕಗಳೆಲ್ಲಾ ಹೊಚ್ಚಹೊಸ ಪುಸ್ತಕಗಳೆಂದು ತೋರಿ, ಅಚ್ಚರಿಗೊಂಡ ಇವರು ಆ ಮುದುಕನ ಬಳಿ ಸಾರಿ ಎದುರು ನಿಲ್ಲಲು  ಆ ವೃದ್ದ ಇವರನ್ನು ದಿಟ್ಟಿಸಿ ಬನ್ನಿ ಬನ್ನಿ,  ಕನ್ನಡದ ಪುಸ್ತಕಗಳು, ಸೊಗಸಾದ ಸಾಹಿತ್ಯ ಉಪಯೋಗಕ್ಕೆ ಬಂದಾವು, ಕೊಳ್ಳಿ  ಎಂದು ಕೈಮುಗಿದ. ಈ ಇಬ್ಬರೂ ಆ ಪುಸ್ತಕಗಳತ್ತ ಇಣುಕಿದರು. ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳವು! ಶಿವರಾಮ ಕಾರಂತ, ಆಲೂರು ವೆಂಕಟರಾಯರು, ಕುವೆಂಪು, ಇಂಥವರ ಪುಸ್ತಕಗಳು! ಇವುಗಳನ್ನು ನೋಡುತ್ತಲೇ ಅಚ್ಚರಿಗೊಂಡ ಬೀಚಿಯವರು "ಅದ್ಸರೀ ಯಜಮಾನ್ರೇ, ಈ ಇಳಿ ವಯಸ್ಸಿನಲ್ಲಿ ನೀವ್ಯಾಕೆ ಹೀಗೆ ಈ ಪುಸ್ತಕಗಳನ್ನು ಹೊತ್ತು ಬೀದಿಬೀದಿ ಸುತ್ತಿ ಮಾರುತ್ತಿದ್ದೀರಿ?"  ಎನ್ನಲು ವಿಚಿತ್ರವಾಗಿ ನಕ್ಕ ಆ ಮುದುಕ " ಹಾಗೇ ಮಾಡ್ಬೇಕೂ ದೇವ್ರು, ಕನ್ನಡ ಪುಸ್ತಕಗಳನ್ನು ಮನೆಮನೇಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳಸಬೇಕೂ ಅಂಬೋದಾದ್ರೆ ಹೀಗೆ ಮಾಡಿದರೆ ಮಾತ್ರ ಆದೀತು  ಅಂತ ನನಗೆ ಅನ್ನಿಸಿತು, ಮಾಡ್ತಿದ್ದೀನಿ, ಈಗ ಹಲವು ವರ್ಷಗಳಿಂದ ಹೀಗೆ ಮಾಡ್ತಿದ್ದೀನಿ" ಎಂದ. ಆಗ ಬೀಚಿ ಮುಂದುವರೆದು " ಆದ್ರೂ ಈ ಮುಪ್ಪಿನಲ್ಲಿ ನೀವು ಹೀಗೆ ಈ ಕನ್ನಡದ ಕೆಲಸವನ್ನ ಮಾಡ್ತಿರೋದ್ನ ನೋಡಿದ್ರೆ ನಮ್ಮಂಥ ಯುವಕರು ನಾಚ್ಕೆಪಟ್ಕೋಬೇಕು. ಅಂದ್ಹಾಗೆ ತಾವ್ಯಾರು? ಎಲ್ಲಿದ್ದೀರಿ?" ಎಂದು ಬೀಚಿಯವರು ಕೇಳಲು ಆ ಮುದುಕ ಪುಸ್ತಕಗಳನ್ನು ಮತ್ತೆ ಮೂಟೆಗೆ ಸೇರಿಸುತ್ತಾ  " ಹೀಗೇನ್ರಿ, ಛತ್ರ ದೇವಸ್ಥಾನಗಳಲ್ಲಿ ಇಳ್ಕೋತೀನಿ, ನದಿ,ಕೆರೆ, ಕೊಳಗಳಲ್ಲಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಸ್ಕೋತೀನಿ. ಊರಿಂದೂರ‍್ಗೆ ಅಲೀತ ಕನ್ನಡ ಪುಸ್ತಕಗಳನ್ನು ಅದಷ್ಟು ಜನಪ್ರಿಯ ಮಾಡೋದೇ ನನ್ನ ಕೆಲಸ ಹಾಗೂ ಉದ್ದಿಶ್ಯ" ಎಂದಾಗ ಕಾಳಿಂಗರಾಯರು " ಆದಾಯ್ತು ಸ್ವಾಮೀ, ತಮ್ಮ ನಾಮಧೇಯ?" ಎಂದು ಕೇಳಲು ಕ್ಷಣ ಕಾಲ ಈ ಇಬ್ಬರನ್ನೂ ದುರುಗುಟ್ಟಿ ದಿಟ್ಟಿಸಿದ ಆ ಮುದುಕ " ನಮ್ಮ ಕಡೆ ತಿಳಿದೋರು ನನ್ನನ್ನು ಪಂಡಿತ ಗಳಗನಾಥಾ ಅಂತ ಕರೀತಾರೇ" ಎಂದು ಮುಕ್ಕಿರಿಯುತ್ತಾ  ತನ್ನ ಮೂಟೆಯನ್ನು ಹೊತ್ತು ನಿಂತಾಗ ದೇಹಾದ್ಯಂತ ಕಂಪನಗೊಂಡ ಬೀಚಿ ಹಾಗೂ ಕಾಳಿಂಗರಾಯರು ಆ ಕ್ಷಣವೇ ಕುಸಿದು ಗಳಗನಾಥರ ಶ್ರೀಚರಣ ಕಮಲಗಳಿಗೆ ಸಾಷ್ಟಾಂಗವೆರಗಿದರು.
    ಇಂತಹ ರೋಮಾಂಚನ ಪ್ರಸಂಗಗಳು "ಕನ್ನಡದ ಕೂಲಿ" ಎಂದೆ ಕರೆಯುತ್ತಿದ್ದ ರಾಜರತ್ನಂ.ಜಿ.ಪಿ ರವರು ಇನ್ನು ಮುಂತಾದ ಮಹಾನೀಯರ ಯಶೋಗಾಥೆ ಕನ್ನಡ ಸಾಹಿತ್ಯ ಹಿಂದೆ ಇದೆ . ಮಯೂರು ಮಾಸ ಪತ್ರಿಕೆಯಲ್ಲಿ  ನವೆಂಬರ ೨೦೧೦ರಲ್ಲಿ ಪ್ರಕಟವಾದ ಯು.ಆರ‍್.ಅನಂತಮೂರ್ತಿ ಯವರ "ಬೌದ್ದಿಕ ಸಂಕಟ ಮತ್ತು ಸೃಜಶೀಲತೆ" ಲೇಖನದಲ್ಲಿ ತಿಳಸಿರುವಂತೆ  ಇವತ್ತು ಕನ್ನಡ ಯಾಕೆ ಉಳಿದಿದೆ ಅಂದರೆ ಇನ್ನೂ ಹಿಂದುಳಿದವರು ಇದ್ದಾರೆ ಎಂದೇ. ಹಾಗಾದರೆ ಕನ್ನಡವನ್ನು ಉಳಿಸುವುದಕ್ಕಾಗಿ ಹಿಂದುಳಿದವರು ಹಿಂದೆಯೇ ಉಳಿದಿರಬೇಕೇ? ಖಂಡಿತವಾಗಿಯೂ ಅದು ಹಾಗಾಗಬೇಕಿಲ್ಲ. ಹಾಗಿಲ್ಲದೆಯೇ ಅನೇಕ ಬಾಷೆಗಳು ಉಳಿದಿವೆ. ಕೊಂಕಣಿ ಮತ್ತು ತುಳು ಭಾಷೆಗಳು ಇದಕ್ಕೆ ಉತ್ತಮ ಉದಾರಹಣೆ. ಕೊಂಕಣಿ ಏಕೆ ಉಳಿದಿದೆ ಎಂದರೆ ಒಬ್ಬ ಕೊಂಕಣಿ ಮತ್ತೊಬ್ಬ ಕೊಂಕಣಿಯನ್ನು ಕಂಡಾಗ ತನ್ನ ಭಾಷೆಯನ್ನು ಬಳಸದೇ ಹೋದರೆ ಇವನು ಗರ್ವಿಷ್ಟ ಎಂದು ಅವನು ತಿಳಿಯುತ್ತಾನೆ. ಈ ಬಗೆಯ ಸಾಮಾಜಿಕ ಅನಿವಾರ್ಯತೆಗಳಿಂದ ಮನೆ ಮಾತುಗಳು ಉಳಿದುಬಿಡುತ್ತವೆ. ತುಳು ಭಾಷೆ ಉಳಿದಿರುವುದೂ ಹೀಗೆಯೇ. ಇಂಥದ್ದೊಂದು ವಾತಾವರಣದಲ್ಲಿ ನಮ್ಮ ಭಾಷೆಗಳು ಉಳಿಯಬೇಕಾದರೆ ಏನು ಮಾಡಬೇಕು. ನಾನು ಬಹಳಷ್ಟು ಸಾರಿ ಹೇಳಿರುವ ವಿಚಾರವೇ ಆಗಿದ್ದರೂ ಅದನ್ನು ಮತ್ತೊಮ್ಮೆ ಹೇಳಬೇಕು ಅನ್ನಿಸುತ್ತದೆ. ನಮ್ಮ ಭಾಷೆಗಳು ಉಳಿಯಲು ಸಾಮಾನ್ಯ ಶಾಲೆಗಳು ಬೇಕು. ನನ್ನ ಅಜ್ಜ ಅಉರೋಹಿತರು ಈ ಪುರೋಹಿತರು ಹೊಸ ಕಾಲದ ಜಾತಿ ವಾದಿಗಳಿಗಿಂತ ಒಳ್ಳೆಯವರು. ಏಕೆಂದರೆ ಅವರು ಸರಳವಾದ ಜನರು ಬಡವರೂ ಹೌದು  ಭವತಿ ಭಿಕ್ಷಾಂದೇಹಿ ಎಂದು ಎಲ್ಲಾ ಕಡೆ ಭಿಕ್ಷೆ ಎತ್ತಿಕೊಂಡು ಬರುತ್ತಿದ್ದರು. ಅವರಿಗೆ ಕನ್ನಡ ಗೊತ್ತಿತ್ತು ಸಂಸ್ಕೃತ ಬಾಯಿಪಾಠವಾಗಿತ್ತು. ಪುರೋಹಿತರ ಮನೆಯಲ್ಲಿ ಹುಟ್ಟಿದ ಎಲ್ಲ ಮಕ್ಕಳಂತೆ ನಾನು ಮನೆಯಲ್ಲಿ ಅಂಗವಸ್ತ್ರ ಧರಿಸುತ್ತಿದ್ದೆ. ಶಾಲೆಗೆ ಹೋಗುವಾಗಲಷ್ಟೇ ಅಂಗಿ ಹಾಕಿಕೊಳ್ಳುತ್ತಿದೆ. ನಾನು ಪುರೋಹಿತರ ಕುಟುಂಬದಲ್ಲಿ ಹುಟ್ಟಿದರೂ ಸಾಮಾನ್ಯ ಶಾಲೆಯಲ್ಲಿ ಕಲಿತೆ. ನನ್ನ ಸುತ್ತಲಿನ ಎಲ್ಲವುಗಳ ಅನುಭವ ಪಡೆದೆ. ಆದರೆ ಈ ಅವಕಾಶ ನನ್ನ ಮೊಮ್ಮಕ್ಕಳಿಗೆ  ಇಲ್ಲ. ಅವರು ಅವರ ವರ್ಗದ ಮಕ್ಕಳ ಜೊತೆಗಷ್ಟೇ ಓದುತ್ತಾರೆ. ನಾವೆಲ್ಲಾ ಇವತ್ತು ನಮ್ಮ ಮಕ್ಕಳನ್ನು ನಮ್ಮ ವರ್ಗದವರ ಮಕ್ಕಳೇ ಇರುವಂಥ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಅವರಿಗೆ ಕನ್ನಡ ಒಂದು ಮನೆ ಮಾತಾಗಿ ಉಳಿದಿರುತ್ತದೆ. ಆದರೆ ನನ್ನ ಹಾಗೆ ಅವರಿಗೆ ಕನ್ನಡ ಬಳಸಲು ಅಂದರೆ ಇಲ್ಲಿ ಬೌದ್ದಿಕ ವಿಚಾರಗಳಿಗೆ ಕನ್ನಡ ಬಳಸುತ್ತಿದ್ದೇನಲ್ಲ ಹಾಗೆ ಅವರಿಗೆ ಕನ್ನಡವನ್ನು ಬಳಸಲು ಆಗುವುದಿಲ್ಲ. ನನ್ನ ವಿಚಾರಗಳನ್ನು ಓದುತ್ತಿರುವ ನೀವೂ ಬೌದ್ದಿಕ ವಿಚಾರಗಳಿಗೆ ಕನ್ನಡವನ್ನು ಬಳಸಲು ಗೊತ್ತಿರುವವರು. ಆದರೆ ಈಗಿನ ಪ್ರತಿಷ್ಠಿತ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಮನೆಯಲ್ಲಿ ಕನ್ನಡ ಮಾತನಾಡಿದರೂ ನಮ್ಮಂತೆ ಕನ್ನಡ ಬಳಸಲು ಸಾಧ್ಯವಿಲ್ಲ. ನಮಗೇಕೆ ಸಾಧ್ಯವಾಗಿದೆ ಎಂದರೆ ನಾವು ಚಿಂತಿಸುವ ಭಾಷೆಯೇ ಕನ್ನಡ.